ದಕ್ಷಿಣ ಕಾಶಿ ಎಂದೇ ಹೆಸರಾದ ಸೊಗಲ ಸೋಮೇಶ್ವರ ಕ್ಷೇತ್ರದ ಎರಡು ಜಲಪಾತಗಳಿಗೆ ಮತತೆ ಜೀವಕಳೆ ಬಂದಿತು. ದಟ್ಟ ಹಸಿರಿನ ಮಧ್ಯೆ ಹರಿದ ನೀರು ಜಲಪಾತಗಳಲ್ಲಿ ಭೋರ್ಗರೆಯಿತು. ದೇವಸ್ಥಾನದ ಕಿರು ಕಾಲುವೆಗಳೂ ತುಂಬಿದವು.
ಕ್ಷೇತ್ರದ ಸುತ್ತ ಇರುವ ಕಾಡು ಒಣಗಿದ್ದು, ನೀರಿನ ಅಭಾವದಿಂದ ವನ್ಯಮೃಗಗಳು ಪರಿತಪಿಸುವಂತಾಗಿತ್ತು. ಏಕಾಏಕಿ ಸುರಿದ ಮಳೆ ಕಾಡಿನ ಜೀವಗಳಿಗೆ ಹರ್ಷ ತಂದಿತು.
ಕೆಲವು ಗ್ರಾಮಗಳಲ್ಲಿ ಬಿರಿಗಾಳಿಗೆ ಹಲವು ಕಡೆ ವಿದ್ಯುತ್ ಕಂಬಗಳ ವಾಲಿದವು. ಜಮೀನುಗಳಲ್ಲಿ ಮಳೆ ನೀರು ನಿಂತು ಒಡ್ಡು ಒಡೆದವು. ಮಳೆ ಇಲ್ಲದೆ ಚಡಪಡಿಸುತ್ತಿದ್ದ ರೈತರಿಗೆ ಭರವಸೆ ಮೂಡಿತು.
ಕಾರವಾರ ವರದಿ: ಜಿಲ್ಲೆಯ ಕರಾವಳಿಯೂ ಸೇರಿದಂತೆ ಮಲೆನಾಡಿನ ಕೆಲ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. ಕಾರವಾರ, ಕುಮಟಾ, ಹೊನ್ನಾವರದಲ್ಲಿ ಮಧ್ಯಾಹ್ನದ ಹೊತ್ತಿಗೆ ಎಡೆಬಿಡದೆ ಕೆಲ ಹೊತ್ತು ಮಳೆ ಸುರಿಯಿತು. ಯಲ್ಲಾಪುರ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿಯೂ ಮಳೆ ಆಗಿದೆ.