ಬೆಳಗಾವಿ– ಕಿತ್ತೂು– ಧಾರವಾಡ ನೂತನ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಬೇಗ ಪ್ರಾರಂಭಿಸಬೇಕು. ನಗರದ ಟಿಳಕವಾಡಿ ಸಿಎಲ್ಸಿ ಸಂಖ್ಯೆ 383 ಹಾಗೂ 382 (ಟಿಳಕವಾಡಿ ಗೇಟ್ ನಂಬರ್ 1 ಹಾಗೂ 2) ಹತ್ತಿರ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಬೇಕು. ನಗರದ ರೈಲು ನಿಲ್ದಾಣದ ಪ್ಲ್ಯಾಟ್ಫಾರಂ ನಂವರ್ 4ಕ್ಕೆ ಪ್ರಯಾಣಿಕರ ಅನುಕೂಲಕ್ಕಾಗಿ ಷಲ್ಟರ್ ನಿರ್ಮಿಸಬೇಕು. ಗೋಕಾಕ ರಸ್ತೆಯ ರೈಲು ನಿಲ್ದಾಣದಲ್ಲಿ ಎಲ್ಲ ಎಕ್ಸ್ಪ್ರೆಸ್ ರೈಲುಗಳ ನಿಲುಗಡೆ ಮಾಡಬೇಕು. ಈಗ ವಾರದಲ್ಲಿ ಒಂದು ಬಾರಿ ಸಂಚರಿಸುವ ಯಸವಂತಪುರ– ಪಂಢರಪುರ ರೈಲನ್ನು ನಾಲ್ಕು ಬಾರಿ ಸಂಚರಿಸುವಂತೆ ಆದೇಶಿಸಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.