‘ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ಕಕ್ಷಿದಾರರ ಸಂದರ್ಶನ ಹಾಗೂ ಸಮಾಲೋಚನೆ ಸ್ಪರ್ಧೆ ನಡೆಯಲಿದೆ. ಇದರೊಂದಿಗೆ ಕಾನೂನು ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆಗಳಿರಲಿವೆ. ವಿದ್ಯಾರ್ಥಿಗಳಿಗೆ, ವಕೀಲರಾಗಲು ಬೇಕಾದ ಕಾನೂನು ಜ್ಞಾನ ಮತ್ತು ಸಂಶೋಧನಾ ನೈಪುಣ್ಯತೆ ಹೆಚ್ಚಿಸುವುದು ಉತ್ಸವ ಉದ್ದೇಶವಾಗಿದೆ. ರಾಜ್ಯ ಹಾಗೂ ದೇಶದ ವಿವಿಧ 24 ಕಾನೂನು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವರು. ಈ ಭಾಗದ ಕಾರ್ಯನಿರತ ವಕೀಲರನ್ನು ನಿರ್ಣಾಯಕರನ್ನಾಗಿ ಆಹ್ವಾನಿಸಲಾಗಿದೆ’ ಎಂದು ಹೇಳಿದರು.