‘ಈ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಿದ್ಧರಿಲ್ಲ ಎಂದೂ ಅವರು ಹೇಳಿದ್ದಾರೆ. ಅವರೊಂದಿಗೆ ಇತ್ತೀಚೆಗೆ ಮಾತುಕತೆ ನಡೆಸಿದ್ದ ನವದೆಹಯಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಅವರು ಸಾವಂತ್ ಮಾತುಕತೆಗೆ ಸಿದ್ಧರಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆದರೆ, ಈಗ ಸಾವಂತ್ ನಿರಾಕರಿಸಿದ್ದಾರೆ. ಇದರಿಂದ ದೆಹಲಿ ಪ್ರತಿನಿಧಿಗೆ ಮುಖಭಂಗ ಆಗಿದೆ. ಈ ಹಿಂದೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೂ ಇದೇ ರೀತಿ ಭರವಸೆ ಕೊಟ್ಟಿದ್ದ ಗೋವಾ ಮುಖ್ಯಮಂತ್ರಿ, ಬಳಿಕ ಹಿಂದೆ ಸರಿದಿದ್ದರು’ ಎಂದು ಹೇಳಿದ್ದಾರೆ.