‘ಎಲ್ಲ ಹೊರಗುತ್ತಿಗೆ ನೌಕರರನ್ನೂ ನಿವೃತ್ತಿ ವಯಸ್ಸಿನವರೆಗೂ ಕೆಲಸದಲ್ಲಿ ಮುಂದುವರಿಸಬೇಕು. ಹಿಂದಿನ ಸರ್ಕಾರ ನೀಡಿದ್ದ ಭರವಸೆಯಂತೆ, ಕಾಯಂ ಸಿಬ್ಬಂದಿಯನ್ನು ಹೊಸದಾಗಿ ನಿರ್ಮಾಣಗೊಂಡ ಹಾಸ್ಟೆಲ್ಗಳಿಗೆ ನೇಮಿಸಿದರೆ ನಮ್ಮನ್ನು ಹಳೆಯ ಹಾಸ್ಟೆಲ್ಗಳಲ್ಲಿ ಮುಂದುವರಿಸಲು ಸಾಧ್ಯವಾಗುತ್ತದೆ. ನಿವೃತ್ತಿ ಹೊಂದುವ ಕಾಯಂ ನೌಕರರಿಂದ ತೆರವಾಗುವ ಹುದ್ದೆಗಳಿಗೆ ನೇಮಿಸಿಕೊಳ್ಳಬೇಕು. ಹೊರಗುತ್ತಿಗೆ ಸಿಬ್ಬಂದಿಯಲ್ಲಿ ನಿವೃತ್ತಿ ವಯಸ್ಸು ತಲುಪಿರುವವರನ್ನು ಸೂಕ್ತ ಪರಿಹಾರ ನೀಡಿ ನಿವೃತ್ತಿಗೊಳಿಸಿದರೆ, ಆ ಹುದ್ದೆಗಳಿಗೆ ನಮ್ಮನ್ನು ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.