<p><strong>ಬೆಳಗಾವಿ: </strong>ತಾಲ್ಲೂಕಿನ ಸುಕ್ಷೇತ್ರ ಸುಳೇಭಾವಿ ಗ್ರಾಮದಲ್ಲಿ 5 ವರ್ಷಗಳಿಗೊಮ್ಮೆ ನಡೆಯುವ ಮಹಾಲಕ್ಷ್ಮೀ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಬಲಿಪಾಢ್ಯಮಿಯ ದಿನವಾದ ಮಂಗಳವಾರ ರಾತ್ರಿ ಸಂಪ್ರದಾಯದಂತೆ ದೇವಿಯನ್ನು ವಿಶ್ವಕರ್ಮರ (ತವರು) ಮನೆಗೆ ಅತ್ಯಂತ ಸಂಭ್ರಮ-ಸಡಗರದಿಂದ ಕಳುಹಿಸಲಾಯಿತು.</p>.<p>ದೇವಿಯನ್ನು ಬಣ್ಣಕ್ಕೆ ಕಳುಹಿಸುವ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ದೇವಸ್ಥಾನದಿಂದ ಲಕ್ಷ್ಮಿ ಗಲ್ಲಿವರೆಗೆ ಕರೆತರಲಾಯಿತು. ವಿಶ್ವಕರ್ಮರ ಮನೆಗೆ ತಂದು ಪ್ರತಿಷ್ಠಾಪಿಸಲಾಯಿತು.</p>.<p>ದೇವಸ್ಥಾನ ಟ್ರಸ್ಟ್ ಸಮಿತಿಯವರು, ಪೂಜಾರಿಗಳು, ದೇವಿ ಹಕ್ಕುದಾರರ ಸಮ್ಮುಖದಲ್ಲಿ ದೇವಿಯನ್ನು ತವರಿಗೆ ಕರೆತರಲಾಯಿತು. 2020ರ ಮಾರ್ಚ್ನಲ್ಲಿ ಜಾತ್ರೆ ನಡೆಯಲಿದೆ.</p>.<p>ಬೆಳಿಗ್ಗೆಯಿಂದಲೇ ಭಕ್ತರು ದೇವಿಗೆ ಉಡಿ ತುಂಬಿ ದರ್ಶನ ಪಡೆದರು. ಸಂಜೆ ಹಿರಿಯರು, ಪೂಜಾರಿಗಳಿಂದ ದೈವದ ಉಡಿ ತುಂಬಿದ ಬಳಿಕ ದೇವಿ ಬಣ್ಣಕ್ಕೆ ಕಳುಹಿಸುವ ವಿಧಾನ ಆರಂಭವಾಯಿತು. ಉಧೋ ಉಧೋ ಎಂಬ ಜಯ ಘೋಷಗಳು ಮೊಳಗಿದವು. ಯುವಕರು ಕುಣಿದು ಸಂಭ್ರಮಿಸಿದರು.</p>.<p>ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸೇರಿದಂತೆ ಅನೇಕ ಗಣ್ಯರು ದರ್ಶನ ಪಡೆದರು.</p>.<p>‘ಮುಂದಿನ ವರ್ಷ ಮಾರ್ಚ್ 10ರಿಂದ 9 ದಿನಗಳವರೆಗೆ ನಡೆಯಲಿರುವ ಜಾತ್ರೆಗೆ ಮುನ್ನವೇ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲಾಗುವುದು. ಭಕ್ತರ ಅನುಕೂಲಕ್ಕಾಗಿ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು’ ಎಂದು ಹೆಬ್ಬಾಳಕರ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: </strong>ತಾಲ್ಲೂಕಿನ ಸುಕ್ಷೇತ್ರ ಸುಳೇಭಾವಿ ಗ್ರಾಮದಲ್ಲಿ 5 ವರ್ಷಗಳಿಗೊಮ್ಮೆ ನಡೆಯುವ ಮಹಾಲಕ್ಷ್ಮೀ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಬಲಿಪಾಢ್ಯಮಿಯ ದಿನವಾದ ಮಂಗಳವಾರ ರಾತ್ರಿ ಸಂಪ್ರದಾಯದಂತೆ ದೇವಿಯನ್ನು ವಿಶ್ವಕರ್ಮರ (ತವರು) ಮನೆಗೆ ಅತ್ಯಂತ ಸಂಭ್ರಮ-ಸಡಗರದಿಂದ ಕಳುಹಿಸಲಾಯಿತು.</p>.<p>ದೇವಿಯನ್ನು ಬಣ್ಣಕ್ಕೆ ಕಳುಹಿಸುವ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ದೇವಸ್ಥಾನದಿಂದ ಲಕ್ಷ್ಮಿ ಗಲ್ಲಿವರೆಗೆ ಕರೆತರಲಾಯಿತು. ವಿಶ್ವಕರ್ಮರ ಮನೆಗೆ ತಂದು ಪ್ರತಿಷ್ಠಾಪಿಸಲಾಯಿತು.</p>.<p>ದೇವಸ್ಥಾನ ಟ್ರಸ್ಟ್ ಸಮಿತಿಯವರು, ಪೂಜಾರಿಗಳು, ದೇವಿ ಹಕ್ಕುದಾರರ ಸಮ್ಮುಖದಲ್ಲಿ ದೇವಿಯನ್ನು ತವರಿಗೆ ಕರೆತರಲಾಯಿತು. 2020ರ ಮಾರ್ಚ್ನಲ್ಲಿ ಜಾತ್ರೆ ನಡೆಯಲಿದೆ.</p>.<p>ಬೆಳಿಗ್ಗೆಯಿಂದಲೇ ಭಕ್ತರು ದೇವಿಗೆ ಉಡಿ ತುಂಬಿ ದರ್ಶನ ಪಡೆದರು. ಸಂಜೆ ಹಿರಿಯರು, ಪೂಜಾರಿಗಳಿಂದ ದೈವದ ಉಡಿ ತುಂಬಿದ ಬಳಿಕ ದೇವಿ ಬಣ್ಣಕ್ಕೆ ಕಳುಹಿಸುವ ವಿಧಾನ ಆರಂಭವಾಯಿತು. ಉಧೋ ಉಧೋ ಎಂಬ ಜಯ ಘೋಷಗಳು ಮೊಳಗಿದವು. ಯುವಕರು ಕುಣಿದು ಸಂಭ್ರಮಿಸಿದರು.</p>.<p>ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸೇರಿದಂತೆ ಅನೇಕ ಗಣ್ಯರು ದರ್ಶನ ಪಡೆದರು.</p>.<p>‘ಮುಂದಿನ ವರ್ಷ ಮಾರ್ಚ್ 10ರಿಂದ 9 ದಿನಗಳವರೆಗೆ ನಡೆಯಲಿರುವ ಜಾತ್ರೆಗೆ ಮುನ್ನವೇ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲಾಗುವುದು. ಭಕ್ತರ ಅನುಕೂಲಕ್ಕಾಗಿ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು’ ಎಂದು ಹೆಬ್ಬಾಳಕರ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>