‘ರಾಜ್ಯದಲ್ಲಿ 66 ಲಕ್ಷ ಮಂದಿ ನೇಕಾರಿಕೆಯಲ್ಲಿ ತೊಡಗಿದ್ದಾರೆ. ಜಿಎಸ್ಟಿ, ನೋಟು ಚಲಾವಣೆ ರದ್ದುಪಡಿಸಿದ್ದು, ಸಾಲ ಹೊರೆ, ಬರಗಾಲ, ಮಾರುಕಟ್ಟೆ ಕುಸಿತ, ನೆರೆಹಾವಳಿಯಿಂದ ತೊಂದರೆ ಅನುಭವಿಸುತ್ತಿದ್ದೇವೆ. ಭ್ರಷ್ಟ ಅಧಿಕಾರಿಗಳಿಂದಾಗಿ ಸರ್ಕಾರದ ಕನಿಷ್ಠ ಸೌಲಭ್ಯವನ್ನೂ ಪಡೆಯಲಾಗುತ್ತಿಲ್ಲ. ರಾಜಕೀಯ ನಾಯಕರು ಚುನಾವಣೆಗಳಿಗಷ್ಟೇ ನಮ್ಮನ್ನು ಸೀಮಿತ ಮಾಡಿಕೊಂಡಿದ್ದಾರೆ. ಸರ್ಕಾರದ ಎಲ್ಲ ಸೌಲಭ್ಯಗಳಿಂದಲೂ ನೇಕಾರರು ವಂಚಿತರಾಗಿದ್ದೇವೆ’ ಎಂದು ತಿಳಿಸಿದರು.