‘ಈ ಬಡಾವಣೆಯು ರುಕ್ಮಿಣಿ ನಗರ ಹಾಗೂ ಭಾರತ ಕಾಲೊನಿಯ ಮಧ್ಯದಲ್ಲಿ ಬರುತ್ತದೆ. 60ಕ್ಕೂ ಹೆಚ್ಚಿನ ಕುಟುಂಬಗಳು ವಾಸಿಸುತ್ತಿವೆ. ಸಾರಿಗೆ ಬಸ್ಗಳನ್ನು ಶಿವತೀರ್ಥ ಅಪಾರ್ಟ್ಮೆಂಟ್ ಬಳಿ ನಿಲ್ಲಿಸಲಾಗುತ್ತಿದೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ. ಹೀಗಾಗಿ, ಬಡಾವಣೆಯಲ್ಲಿ ನಗರ ಸಾರಿಗೆ ಬಸ್ಗಳು ನಿಲುಗಡೆ ಮಾಡುವಂತೆ ನಿರ್ದೇಶನ ಕೊಡಬೇಕು’ ಎಂದು ಕೋರಿದ್ದಾರೆ.