<p>ಬೆಳಗಾವಿ: ‘ರಾಮದುರ್ಗ ಪಟ್ಟಣದ ನಿಂಗಾಪೂರಪೇಟೆಯ ಈಶ್ವರ ದೇವಾಲಯ ಮರು ನಿರ್ಮಾಣಕ್ಕೆ ಧನಸಹಾಯ ನೀಡಬೇಕು’ ಎಂದು ಅಲ್ಲಿನ ನಿವಾಸಿಗಳು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.</p>.<p>‘ಅದು ಪುರಾತನ ದೇವಸ್ಥಾನವಾಗಿದೆ. ಕೆಲವು ವರ್ಷಗಳಿಂದ ಭಾರಿ ಮಳೆ ಹಾಗೂ ಮಲಪ್ರಭಾ ನದಿಯಲ್ಲಿ ಉಂಟಾದ ಪ್ರವಾಹಕ್ಕೆ ತುತ್ತಾಗಿ ದೇವಸ್ಥಾನಕ್ಕೆ ಹಾನಿಯಾಗಿದೆ. ಅದನ್ನು ಮರುನಿರ್ಮಾಣ ಮಾಡಬೇಕಾದ ಅಗತ್ಯವಿದೆ. ಮುಜರಾಯಿ ಇಲಾಖೆ ಮೂಲಕ ಒದಗಿಸಬೇಕು’ ಎಂದು ಕೋರಿದರು.</p>.<p>‘ಸಾರ್ವಜನಿಕ ಗ್ರಂಥಾಲಯ ಸ್ಥಾಪಿಸಬೇಕು. ರಾಮದುರ್ಗ ತಾಲ್ಲೂಕು ಆಸ್ಪತ್ರೆಯು ದೂರದಲ್ಲಿರುವ ಕಾರಣ, ನಮ್ಮ ಪೇಟೆಯಲ್ಲೇ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕು. ಸಮಾಜದ ವತಿಯಿಂದ ಖಾಲಿ ಜಾಗ ನೀಡುತ್ತೇವೆ. ಅಲ್ಲಿ ಆರೋಗ್ಯ ಕೇಂದ್ರ ಸ್ಥಾಪಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.</p>.<p>ಮುಖಂಡರಾದ ಸಂಕಪ್ಪ ಮುಕೈನ್ನವರ, ಭರಮಣ್ಣ ವಾಳಿ, ನಾರಾಯಣಪ್ಪ ಹೆಗಡೆ, ನೇಮಣ್ಣ ಹಾಲೊಳ್ಳಿ, ಗಣಪತಿ ಗಾರಗಿ, ಷಣ್ಮುಖ ಮುಕೈನ್ನವರ, ಕಾಶಪ್ಪ ಹೆಗಡೆ, ಲುಮೇಶ ಪಟ್ಟದಕಲ್ಲ, ಈರಣ್ಣ ನಂದಿ, ನಾರಾಯಣ ಮುಕೈನ್ನವರ, ಸಂತೋಷ ಶಾಗಾಂವಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಳಗಾವಿ: ‘ರಾಮದುರ್ಗ ಪಟ್ಟಣದ ನಿಂಗಾಪೂರಪೇಟೆಯ ಈಶ್ವರ ದೇವಾಲಯ ಮರು ನಿರ್ಮಾಣಕ್ಕೆ ಧನಸಹಾಯ ನೀಡಬೇಕು’ ಎಂದು ಅಲ್ಲಿನ ನಿವಾಸಿಗಳು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.</p>.<p>‘ಅದು ಪುರಾತನ ದೇವಸ್ಥಾನವಾಗಿದೆ. ಕೆಲವು ವರ್ಷಗಳಿಂದ ಭಾರಿ ಮಳೆ ಹಾಗೂ ಮಲಪ್ರಭಾ ನದಿಯಲ್ಲಿ ಉಂಟಾದ ಪ್ರವಾಹಕ್ಕೆ ತುತ್ತಾಗಿ ದೇವಸ್ಥಾನಕ್ಕೆ ಹಾನಿಯಾಗಿದೆ. ಅದನ್ನು ಮರುನಿರ್ಮಾಣ ಮಾಡಬೇಕಾದ ಅಗತ್ಯವಿದೆ. ಮುಜರಾಯಿ ಇಲಾಖೆ ಮೂಲಕ ಒದಗಿಸಬೇಕು’ ಎಂದು ಕೋರಿದರು.</p>.<p>‘ಸಾರ್ವಜನಿಕ ಗ್ರಂಥಾಲಯ ಸ್ಥಾಪಿಸಬೇಕು. ರಾಮದುರ್ಗ ತಾಲ್ಲೂಕು ಆಸ್ಪತ್ರೆಯು ದೂರದಲ್ಲಿರುವ ಕಾರಣ, ನಮ್ಮ ಪೇಟೆಯಲ್ಲೇ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕು. ಸಮಾಜದ ವತಿಯಿಂದ ಖಾಲಿ ಜಾಗ ನೀಡುತ್ತೇವೆ. ಅಲ್ಲಿ ಆರೋಗ್ಯ ಕೇಂದ್ರ ಸ್ಥಾಪಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.</p>.<p>ಮುಖಂಡರಾದ ಸಂಕಪ್ಪ ಮುಕೈನ್ನವರ, ಭರಮಣ್ಣ ವಾಳಿ, ನಾರಾಯಣಪ್ಪ ಹೆಗಡೆ, ನೇಮಣ್ಣ ಹಾಲೊಳ್ಳಿ, ಗಣಪತಿ ಗಾರಗಿ, ಷಣ್ಮುಖ ಮುಕೈನ್ನವರ, ಕಾಶಪ್ಪ ಹೆಗಡೆ, ಲುಮೇಶ ಪಟ್ಟದಕಲ್ಲ, ಈರಣ್ಣ ನಂದಿ, ನಾರಾಯಣ ಮುಕೈನ್ನವರ, ಸಂತೋಷ ಶಾಗಾಂವಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>