<p><strong>ಬೆಳಗಾವಿ:</strong> ಜಿತೋ (ಜೈನ ಅಂತರರಾಷ್ಟ್ರೀಯ ವ್ಯಾಪಾರ ಸಂಸ್ಥೆ) ಸಂಸ್ಥೆಯ ವತಿಯಿಂದ ತಾಲ್ಲೂಕಿನ ಹಲಗಾ ಗ್ರಾಮದ ಮಹಾವೀರ ಗೋಶಾಲೆ ಆವರಣದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮ ಈಚೆಗೆ ನಡೆಯಿತು.</p>.<p>ಆರ್ಎಫ್ಒ ಪ್ರಶಾಂತ ಜೈನ್ ಚಾಲನೆ ನೀಡಿದರು. ‘ಸಮಾಜ ಸೇವಾ ಸಂಸ್ಥೆಗಳು ಈ ರೀತಿಯಲ್ಲಿ ಬೃಹತ್ ವೃಕ್ಷಾಪರೋಪಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಲ್ಲಿ ಸಾಮಾಜಿಕ ಅರಣ್ಯ ಬೆಳೆಸಲು ಸಹಕಾರಿಯಾಗಲಿದೆ. ಅಲ್ಲದೇ ಮುಂದಿನ ಪೀಳಿಗೆಗೆ ಅದ್ಭುತ ಕೊಡುಗೆಯನ್ನು ನಾವು ನೀಡಬಹುದಾಗಿದೆ. ಸಸಿಗಳನ್ನು ನೆಡುವ ಜೊತೆಗೆ ಅವುಗಳ ಪಾಲನೆಯೂ ಆಗಬೇಕು’ ಎಂದರು.</p>.<p>ಜಿತೋ ಬೆಳಗಾವಿ ವಿಭಾಗದ ಅಧ್ಯಕ್ಷ ಸುನೀಲ ಕಟಾರಿಯಾ, ‘400 ಸಸಿಗಳನ್ನು ನೆಡಲಾಗುತ್ತಿದೆ. ಸಂಸ್ಥೆಯು ಕೈಗೊಂಡಿರುವ ಈ ಅಭಿಯಾನ ಒಂದು ವರ್ಷದವರೆಗೆ ನಡೆಯಲಿದೆ. ಸಸಿಗಳ ಬಗ್ಗ ವಿಶೇಷ ನಿಗಾ ವಹಿಸಲಾಗುವುದು. ಇದಕ್ಕಾಗಿ ಇಬ್ಬರು ಸಿಬ್ಬಂದಿ ನೇಮಿಸಲಾಗುವುದು’ ಎಂದು ತಿಳಿಸಿದರು.</p>.<p>ಮಹಾವೀರ ಗೋಶಾಲೆಯ ಅಧ್ಯಕ್ಷ ಜಬ್ಬರಚಂದ ಮಾತನಾಡಿ, ಜಿತೋ ಮಹಿಳಾ ವಿಭಾಗದ ಅಧ್ಯಕ್ಷೆ ಅರುಣಾ ಶಹಾ ಮಾತನಾಡಿದರು.</p>.<p>ಜಿತೋ ಸಂಸ್ಥೆಯ ವಿಕ್ರಮ ಜೈನ, ಅಮಿತ ದೋಷಿ, ಧನುಸುಖ ಜೈನ, ಜೀವನ ಪೋರವಾಲ, ಮನೋಜ ಸಂಚೇತಿ, ಮಹೇಂದ್ರ ಪೋರವಾಲ, ಜಯದೀಪ ಲೆಂಗಡೆ, ಸುದರ್ಶನ ಶಿಂತ್ರಿ, ಜಿನದತ್ತ ಚಿಕ್ಕಪರಪ್ಪ ಇದ್ದರು.</p>.<p>ವೃಕ್ಷಾರೋಪಣ ಕಾರ್ಯಕ್ರಮ ಸಂಯೋಜಕ ಮಹೇಂದ್ರ ಪರಮಾರ ಸ್ವಾಗತಿಸಿದರು. ಜಿತೋ ಸಂಸ್ಥೆಯ ಕಾರ್ಯದರ್ಶಿ ಅಂಕಿತ ಖೋಡಾ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಜಿತೋ (ಜೈನ ಅಂತರರಾಷ್ಟ್ರೀಯ ವ್ಯಾಪಾರ ಸಂಸ್ಥೆ) ಸಂಸ್ಥೆಯ ವತಿಯಿಂದ ತಾಲ್ಲೂಕಿನ ಹಲಗಾ ಗ್ರಾಮದ ಮಹಾವೀರ ಗೋಶಾಲೆ ಆವರಣದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮ ಈಚೆಗೆ ನಡೆಯಿತು.</p>.<p>ಆರ್ಎಫ್ಒ ಪ್ರಶಾಂತ ಜೈನ್ ಚಾಲನೆ ನೀಡಿದರು. ‘ಸಮಾಜ ಸೇವಾ ಸಂಸ್ಥೆಗಳು ಈ ರೀತಿಯಲ್ಲಿ ಬೃಹತ್ ವೃಕ್ಷಾಪರೋಪಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಲ್ಲಿ ಸಾಮಾಜಿಕ ಅರಣ್ಯ ಬೆಳೆಸಲು ಸಹಕಾರಿಯಾಗಲಿದೆ. ಅಲ್ಲದೇ ಮುಂದಿನ ಪೀಳಿಗೆಗೆ ಅದ್ಭುತ ಕೊಡುಗೆಯನ್ನು ನಾವು ನೀಡಬಹುದಾಗಿದೆ. ಸಸಿಗಳನ್ನು ನೆಡುವ ಜೊತೆಗೆ ಅವುಗಳ ಪಾಲನೆಯೂ ಆಗಬೇಕು’ ಎಂದರು.</p>.<p>ಜಿತೋ ಬೆಳಗಾವಿ ವಿಭಾಗದ ಅಧ್ಯಕ್ಷ ಸುನೀಲ ಕಟಾರಿಯಾ, ‘400 ಸಸಿಗಳನ್ನು ನೆಡಲಾಗುತ್ತಿದೆ. ಸಂಸ್ಥೆಯು ಕೈಗೊಂಡಿರುವ ಈ ಅಭಿಯಾನ ಒಂದು ವರ್ಷದವರೆಗೆ ನಡೆಯಲಿದೆ. ಸಸಿಗಳ ಬಗ್ಗ ವಿಶೇಷ ನಿಗಾ ವಹಿಸಲಾಗುವುದು. ಇದಕ್ಕಾಗಿ ಇಬ್ಬರು ಸಿಬ್ಬಂದಿ ನೇಮಿಸಲಾಗುವುದು’ ಎಂದು ತಿಳಿಸಿದರು.</p>.<p>ಮಹಾವೀರ ಗೋಶಾಲೆಯ ಅಧ್ಯಕ್ಷ ಜಬ್ಬರಚಂದ ಮಾತನಾಡಿ, ಜಿತೋ ಮಹಿಳಾ ವಿಭಾಗದ ಅಧ್ಯಕ್ಷೆ ಅರುಣಾ ಶಹಾ ಮಾತನಾಡಿದರು.</p>.<p>ಜಿತೋ ಸಂಸ್ಥೆಯ ವಿಕ್ರಮ ಜೈನ, ಅಮಿತ ದೋಷಿ, ಧನುಸುಖ ಜೈನ, ಜೀವನ ಪೋರವಾಲ, ಮನೋಜ ಸಂಚೇತಿ, ಮಹೇಂದ್ರ ಪೋರವಾಲ, ಜಯದೀಪ ಲೆಂಗಡೆ, ಸುದರ್ಶನ ಶಿಂತ್ರಿ, ಜಿನದತ್ತ ಚಿಕ್ಕಪರಪ್ಪ ಇದ್ದರು.</p>.<p>ವೃಕ್ಷಾರೋಪಣ ಕಾರ್ಯಕ್ರಮ ಸಂಯೋಜಕ ಮಹೇಂದ್ರ ಪರಮಾರ ಸ್ವಾಗತಿಸಿದರು. ಜಿತೋ ಸಂಸ್ಥೆಯ ಕಾರ್ಯದರ್ಶಿ ಅಂಕಿತ ಖೋಡಾ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>