ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೋಮವಾರ ಮಾತನಾಡಿದ ಅವರು, ‘ಸೋಂಕಿತರ ಪರೀಕ್ಷಾ ವರದಿ, ಸಂಪರ್ಕಿತರ ಪತ್ತೆ ಹಾಗೂ ಲಸಿಕೆ ವಿತರಣೆವರೆಗೂ ಸರ್ಕಾರವು ಎಡವಿದೆ. ಎಚ್ಚೆತ್ತುಕೊಂಡು ಲಸಿಕೆ ನೀಡುವ ಕೆಲಸ ಮಾಡಬೇಕು. ಇದ್ಯಾವುದೇ ಹಂತದಲ್ಲಿ ಸರ್ಕಾರ ಜನರಪರ ಕಾಳಜಿ ವಹಿಸುತ್ತಿಲ್ಲ. ರಾಜ್ಯದಲ್ಲಿ 20ರಿಂದ 35 ವಯೋಮಾನವರಿಗೆ ಸೋಂಕು ತಗುಲುತ್ತಿದೆ. ಆದರೆ, ಸರ್ಕಾರ ಮಾತ್ರ 45 ವರ್ಷಕ್ಕೂ ಮೇಲ್ಪಟ್ಟವರಿಗೆ ಮಾತ್ರ ಈ ಲಸಿಕೆ ನೀಡುತ್ತಿದೆ. ಕಳೆದ 15 ದಿನಗಳಲ್ಲಿ ಬಹಳಷ್ಟು ಯುವಕರು ಸೋಂಕಿಗೆ ಬಲಿಯಾಗಿದ್ದಾರೆ. ಆದರೂ ಆಡಳಿತ ವ್ಯವಸ್ಥೆ ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಟೀಕಿಸಿದರು.