ರೈತ ಮಹಿಳೆಯನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವಹೇಳನ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, 'ಉದ್ವೇಗದಲ್ಲಿ ಒಂದು ಮಾತು ಆಡಿರಬಹುದು. ಮುಖ್ಯಮಂತ್ರಿ ಹಾಗೂ ಮಹಿಳೆ ಇಬ್ಬರೂ ಕ್ಷಮೆ ಕೇಳಿರುವುದರಿಂದ ಅದು ಮುಗಿದ ಅಧ್ಯಾಯವಾಗಿದೆ. ಹೀಗಾಗಿ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ಜೆಡಿಎಸ್ ಪಕ್ಷದ ಚಿಹ್ನೆಯಲ್ಲೇ ಮಹಿಳೆ ಇದ್ದಾಳೆ. ಪಕ್ಷದ ಚಿಹ್ನೆಯನ್ನು ಪೂಜಿಸುವ, ಗೌರವಿಸುವ ಕ್ರಮ ನಮ್ಮದು' ಎಂದು ಹೇಳಿದರು.