‘ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಸೇರಿಸಲು ಮಾರ್ಚ್ 1ರಂದು ಹಳೆಯ ಪಾಲಿಕೆ ಕಚೇರಿಯಲ್ಲಿ ಅರ್ಜಿ ಕೊಟ್ಟಿದ್ದೆ. ಆದರೆ, ಪಟ್ಟಿ ಪರೀಕ್ಷಿಸಿದಾಗ ಹೆಸರು ಕಾಣಿಸಲಿಲ್ಲ. ಈ ಕುರಿತು ಶನಿವಾರ ವಿಚಾರಿಸಲು ಹೋದಾಗ ಅಲ್ಲಿನ ಸಿಬ್ಬಂದಿ ಸರಿಯಾಗಿ ಸ್ಪಂದಿಸಲಿಲ್ಲ. ಕಚೇರಿ ಕೆಲಸದ ಅವಧಿಯಲ್ಲಿ ತರಕಾರಿ ಸ್ವಚ್ಛಗೊಳಿಸುವ ಕೆಲಸದಲ್ಲಿ ಮಗ್ನರಾಗಿದ್ದರು. ಅಲ್ಲದೇ, ಹೊಸ ಪಾಲಿಕೆ ಕಚೇರಿಗೆ ಹೋಗಿ ಎಂದು ನಮ್ಮ ದಾರಿ ತಪ್ಪಿಸಿದರು. ಬೇಜವಾಬ್ದಾರಿ ಹಾಗೂ ದರ್ಪದಿಂದ ವರ್ತಿಸಿದರು’ ಎಂದು ಅನುಭವ ಬರೆದುಕೊಂಡಿದ್ದಾರೆ.