5 ದಿನಗಳ ಹಿಂದೆಯೇ ಕೆಲವರಲ್ಲಿ ವಾಂತಿ–ಭೇದಿ ಕಾಣಿಸಿಕೊಂಡಿತ್ತು. ಇದೇ ಕಾರಣದಿಂದ ಸರಸ್ವತಿ ನಿಧನರಾದರು. ಆದರೆ, ಗ್ರಾಮ ಪಂಚಾಯಿತಿಯವರು ಅದನ್ನು ವಯೋಸಹಜ ಸಾವು ಎಂದು ಪರಿಗಣಿಸಿ ನಿರ್ಲಕ್ಷ್ಯಿಸಿದರು. ಅ. 25 ಹಾಗೂ 26ರಂದು ಏಕಾಏಕಿ ಕಾಯಿಲೆ ಉಲ್ಬಣವಾಗಿದೆ. ನಂತರ ಹಲವರು ಕುಟುಂಬ ಸಮೇತ ಬಂದು ಆಸ್ಪತ್ರೆ ದಾಖಲಾಗಿದ್ದಾರೆ.