ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ದೇಗಾಂವ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಿರಗಾಪುರ ಗ್ರಾಮದಲ್ಲಿ ಶಿಥಿಲಗೊಂಡಿದ್ದ ಮೇಲ್ಮಟ್ಟದ ಟ್ಯಾಂಕ್ ನಾಶಪಡಿಸಲು ಜಾಗೃತೆ ವಹಿಸದ ಪರಿಣಾಮ ಪಕ್ಕದ ಕಟ್ಟಡದ ಮೇಲೆ ಅದು ಉರುಳಿ ಬಿದ್ದು ಎರಡು ಮನೆ ಜಖಂಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ.
ಗುರುಸಿದ್ದಯ್ಯ ಶಹಾಪುರಮಠ ಹಾಗೂ ಮಹಾದೇವಿ ಶಹಾಪುರಮಠ ಅವರ ಮನೆಗಳಿಗೆ ಹಾನಿ ಸಂಭವಿಸಿದೆ. ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
‘ಶಿಥಿಲಗೊಂಡ ಮೇಲ್ಮಟ್ಟದ ಟ್ಯಾಂಕ್ ಗೆ ಹಗ್ಗ ಕಟ್ಟಿ ಜನರಿಂದ ಎಳೆಸಲಾಯಿತು. ಹೀಗಾಗಿ ಈ ಅನಾಹುತ ನಡೆಯಿತು’ ಎಂದು ಮನೆಯವರು ದೂರಿದರು. ‘ಕಟ್ಟಡಕ್ಕೆ ಹಾನಿಯಾಗಿದೆ.
ಪರಿಹಾರ ವಿತರಿಸಲಾಗುವುದು:‘ನೀರಿನ ಟ್ಯಾಂಕ್ ಬಹಳ ಶಿಥಿಲಗೊಂಡಿತ್ತು. ಅದನ್ನು ತೆರವುಗೊಳಿಸುವುದು ಅನಿವಾರ್ಯವಾಗಿತ್ತು. ಆಕಸ್ಮಿಕ ಘಟನೆ ನಡೆದುಹೋಗಿದೆ. ಹಾನಿಗೊಳಗಾದ ಮನೆ ಮಾಲೀಕರಿಗೆ ಪರಿಹಾರ ನೀಡಲಾಗುವುದು’ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕುಸುಮಾ ತಿಳಿಸಿದರು.