<p><strong>ಬೆಳಗಾವಿ:</strong> ಬೆಂಗಳೂರಿನ ನ್ಯೂ ಹಾರಿಜೋನ್ ಕಾಲೇಜು ತಂಡದವರು ಇಲ್ಲಿನ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಕಾಲೇಜು ವತಿಯಿಂದ ಆಯೋಜಿಸಿದ್ದ ವಿಟಿಯು ಅಂತರವಲಯ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಪಡೆದುಕೊಂಡರು.</p>.<p>ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಹಾರಿಜೋನ್ ಕಾಲೇಜು ತಂಡದವರು ಮೈಸೂರಿನ ಎಂಐಜಿ ಕಾಲೇಜು ತಂಡದವರನ್ನು ಸೋಲಿಸಿದರು. ಮಂಗಳೂರಿನ ಎಸ್ಐಟಿ ಕಾಲೇಜು ಮತ್ತು ಹಾಸನದ ಎಂಸಿಇ ಕಾಲೇಜು ತಂಡದವರು ಕ್ರಮವಾಗಿ 3ನೇ ಹಾಗೂ 4ನೇ ಬಹುಮಾನ ಗಳಿಸಿದರು.</p>.<p>ಅಂಗಡಿ ತಾಂತ್ರಿಕ ಕಾಲೇಜಿನ ಆಡಳಿತಾಧಿಕಾರಿ ರಾಜು ಜೋಶಿ ಹಾಗೂ ಪ್ರಾಚಾರ್ಯ ಸಂಜಯ ಪೂಜಾರಿ ಬಹುಮಾನ ವಿತರಿಸಿದರು. ಜಿಮ್ಖಾನ ಅಧ್ಯಕ್ಷ ಪ್ರೊ.ಕಿರಣ ಪೋತದಾರ, ಪ್ರೊ.ಅಮರ ಬ್ಯಾಕೋಡಿ, ಬೆಂಗಳೂರಿನ ಎಸ್.ಜೆ.ಬಿ.ಐ.ಟಿ. ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ರಂಗನಾಥ, ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಭೈರಪ್ಪ, ಬಿಐಟಿಯ ದೈಹಿಕ ಶಿಕ್ಷಣ ನಿರ್ದೇಶಕ ದಾಸೇಗೌಡ, ಆರ್ಸಿಯು ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಜಿ.ಎನ್. ಪಾಟೀಲ, ಟೂರ್ನಿಯ ಸಂಚಾಲಕ ವಿಶಾಂತ ದಮೋಣೆ, ಎಂ.ಎನ್. ಖೋತ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಬೆಂಗಳೂರಿನ ನ್ಯೂ ಹಾರಿಜೋನ್ ಕಾಲೇಜು ತಂಡದವರು ಇಲ್ಲಿನ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಕಾಲೇಜು ವತಿಯಿಂದ ಆಯೋಜಿಸಿದ್ದ ವಿಟಿಯು ಅಂತರವಲಯ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಪಡೆದುಕೊಂಡರು.</p>.<p>ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಹಾರಿಜೋನ್ ಕಾಲೇಜು ತಂಡದವರು ಮೈಸೂರಿನ ಎಂಐಜಿ ಕಾಲೇಜು ತಂಡದವರನ್ನು ಸೋಲಿಸಿದರು. ಮಂಗಳೂರಿನ ಎಸ್ಐಟಿ ಕಾಲೇಜು ಮತ್ತು ಹಾಸನದ ಎಂಸಿಇ ಕಾಲೇಜು ತಂಡದವರು ಕ್ರಮವಾಗಿ 3ನೇ ಹಾಗೂ 4ನೇ ಬಹುಮಾನ ಗಳಿಸಿದರು.</p>.<p>ಅಂಗಡಿ ತಾಂತ್ರಿಕ ಕಾಲೇಜಿನ ಆಡಳಿತಾಧಿಕಾರಿ ರಾಜು ಜೋಶಿ ಹಾಗೂ ಪ್ರಾಚಾರ್ಯ ಸಂಜಯ ಪೂಜಾರಿ ಬಹುಮಾನ ವಿತರಿಸಿದರು. ಜಿಮ್ಖಾನ ಅಧ್ಯಕ್ಷ ಪ್ರೊ.ಕಿರಣ ಪೋತದಾರ, ಪ್ರೊ.ಅಮರ ಬ್ಯಾಕೋಡಿ, ಬೆಂಗಳೂರಿನ ಎಸ್.ಜೆ.ಬಿ.ಐ.ಟಿ. ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ರಂಗನಾಥ, ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಭೈರಪ್ಪ, ಬಿಐಟಿಯ ದೈಹಿಕ ಶಿಕ್ಷಣ ನಿರ್ದೇಶಕ ದಾಸೇಗೌಡ, ಆರ್ಸಿಯು ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಜಿ.ಎನ್. ಪಾಟೀಲ, ಟೂರ್ನಿಯ ಸಂಚಾಲಕ ವಿಶಾಂತ ದಮೋಣೆ, ಎಂ.ಎನ್. ಖೋತ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>