ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಲಕ್ಷ್ಮಿ ಅವರನ್ನು ಜಾರಕಿಹೊಳಿ ಕುಟುಂಬವೇ ಬೆಳೆಸಿದೆ. ನಾನು ವಿರೋಧಿಸಿದ್ದಾಗಲೂ ಸತೀಶ ಅವರು ಲಕ್ಷ್ಮಿ ಅವರನ್ನು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿದ್ದರು. ಈಗ ಶಾಸಕಿಯಾದ ಮೇಲೆ ಮೆರೆದಾಡುತ್ತಿದ್ದಾರೆ. ಸೊಕ್ಕಿನಿಂದ ಮೆರೆದಾಡಬಾರದು. ಜನರು ಬುದ್ಧಿ ಕಲಿಸುತ್ತಾರೆ’ ಎಂದು ಹೇಳಿದರು.