‘ಗಾಂಧಿ ಜಯಂತಿಯಂದು ಪಕ್ಷದ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಎಸ್.ಆರ್. ಪಾಟೀಲ ಸೇರಿ ಗಣ್ಯರು ಸೇವಾದಳ ಕಚೇರಿಗೆ ಬರುವರು. ಅದಕ್ಕೂ ಮುನ್ನ, ಬೆಳಗಾವಿ ನಗರದ ಸಂಗೊಳ್ಳಿರಾಯಣ್ಣ ವೃತ್ತದ ಬಳಿ ನಿರ್ಮಿಸಿರುವ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟಿಸುವರು. ಈ ಹಿಂದೆ ದಿನಾಂಕ ನಿಗದಿಯಾಗಿತ್ತು. ಆದರೆ, ಕೋವಿಡ್–19 ಲಾಕ್ಡೌನ್ ಕಾರಣ ಮುಂದೂಡಲಾಗಿತ್ತು’ ಎಂದು ಹೇಳಿದರು.