ಇಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಅಪಾರ ಶ್ರಮವಹಿಸಿದ ಅನಂತಕುಮಾರ್ ಅವರು ಈಗಿಲ್ಲ. ಅವರ ಪತ್ನಿ ತೇಜಸ್ವಿನಿ ಪರ ಅನುಕಂಪದ ಅಲೆ ಇದ್ದಾಗಲೂ ಏಕೆ ಟಿಕೆಟ್ ತಪ್ಪಿಸಲಾಯಿತು? ಇನ್ನೊಂದೆಡೆ, ಮಂಡ್ಯದಲ್ಲಿ ಸ್ಪರ್ಧಿಸಿರುವ ಸುಮಲತಾ ಅವರ ಬಗ್ಗೆ ಏಕೆ ಬಿಜೆಪಿಯವರು ಅನುಕಂಪ ವ್ಯಕ್ತಪಡಿಸುತ್ತಿದ್ದಾರೆ’ ಎಂದರು.