ಬೆಳಗಾವಿ: ಇಲ್ಲಿನ ಕುಟುಂಬ ಯೋಜನೆ ಸಂಘ ಹಾಗೂ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ (ಸಿಟಿಇ) ಸಹಯೋಗದಲ್ಲಿ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಭಾರತೀಯ ಕುಟುಂಬ ಕಲ್ಯಾಣ ಸಂಘ (ಎಫ್ಪಿಎಐ) ಬೆಳಗಾವಿ ಅಧ್ಯಕ್ಷ ಡಾ.ವಿ.ಸಿ. ಬಾವಡೆಕರ ಉದ್ಘಾಟಿಸಿದರು.
ಮುಖ್ಯಅತಿಥಿಯಾಗಿದ್ದ ಬೆಂಗಳೂರಿನ ಐಆರ್ಸಿಎಸ್ನ ವ್ಯವಸ್ಥಾಪನ ಸಮಿತಿ ರಾಜ್ಯಾಧ್ಯಕ್ಷ ಡಾ.ಎಸ್.ಬಿ. ಕುಲಕರ್ಣಿ, ‘ಮಾನವೀಯತೆಯಿಂದ ಶಾಂತಿಯ ಕಡೆಗೆ ಎನ್ನುವುದುರೆಡ್ಕ್ರಾಸ್ ಸಂಸ್ಥೆಯ ಈ ವರ್ಷದ ಘೋಷವಾಕ್ಯವಾಗಿದೆ. ಆ ತತ್ವವನ್ನು ಎಲ್ಲರೂ ಪಾಲಿಸಬೇಕು’ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ರಾಜೀವ ವಿ.ನಾಯಕ ಅಧ್ಯಕ್ಷತೆ ವಹಿಸಿದ್ದರು. ಪ್ರವೀಣ ಮರೆಣ್ಣವರ ಪ್ರಾರ್ಥಿಸಿದರು. ಆರ್.ಎಸ್. ಬಡಿಗೇರ ಸ್ವಾಗತಿಸಿದರು. ಬಿ.ಡಿ. ಕಾರದಗೆ ಪರಿಚಯಿಸಿದರು. ಕೃಷ್ಣ ಗುಮಾಸ್ತೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣಪ್ಪ ದಿನ್ನಿ ನಿರೂಪಿಸಿದರು. ಕೀರ್ತಿ ಕಡೊಳ್ಳಿ ವಂದಿಸಿದರು.