ಗೋಕಾಕ: ಶ್ರಾವಣ ಮಾಸದಲ್ಲಿ ಬರುವ ನಾಲ್ಕು ಸೋಮವಾರ ದಿನಗಳಂದು ಭಕ್ತರು ಪುಣ್ಯಕ್ಷೇತ್ರ ಯೋಗಿಕೊಳ್ಳದ ಬೆಟ್ಟದ ಮೇಲಿರುವ ಮಲ್ಲಿಕಾರ್ಜುನ (ಮಲ್ಲಯ್ಯ) ಸ್ವಾಮಿ ದರ್ಶನ ಪಡೆಯುತ್ತಾರೆ. ಆದರೆ, ಭಾನುವಾರ ಮಾರ್ಕಂಡೇಯ ನದಿಯ ಹಿನ್ನೀರಿನಲ್ಲಿ ಸುರಿದ ಮಳೆಯಿಂದಾಗಿ ನದಿಗೆ ಮಹಾಪೂರ ಬಂದು ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.