<p>ರಾಮದುರ್ಗ: ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಬೆಳೆಸಿಕೊಳ್ಳಲು ಇಂತಹ ಟಿಎಲ್ಎಂ ಮತ್ತು ಮೆಟ್ರಿಕ್ ಮೇಳಗಳು ಉಪಯುಕ್ತವಾಗಿವೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಮಹಾದೇವಿ ರೊಟ್ಟಿ ಹೇಳಿದರು. <br /> <br /> ನರಸಾಪುರ ಕ್ಲಸ್ಟರ್ ಮಟ್ಟದ ಟಿಎಲ್ಎಂ ಮತ್ತು ಮೆಟ್ರಿಕ್ ಮೇಳವನ್ನು ಚಿಲಮೂರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದ ಅವರು ಇಂಥ ಮೇಳಗಳು ಮಕ್ಕಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲಿವೆ ಎಂದರು.<br /> <br /> ಪುಸ್ತಕ ಜ್ಞಾನದ ಜೊತೆಗೆ ಮೇಳಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಉಪಯುಕ್ತ ಆಗಲಿವೆ. ಪ್ರಾಯೋಗಿಕ ಅನುಭವಕ್ಕೆ ಮೇಳಗಳು ಪೂರಕವಾಗಿ ಕೆಲಸ ಮಾಡುತ್ತವೆ ಎಂದು ಐಇಆರ್ಟಿ ಆರ್.ಎಸ್. ಸಂಕಣ್ಣವರ ಮತ್ತು ಸಿಆರ್ಪಿ ಆರ್.ಪಿ. ಬೆಟಗೇರಿ ಅಭಿಪ್ರಾಯಪಟ್ಟರು.<br /> <br /> ಮುಖ್ಯ ಶಿಕ್ಷಕಿ ಆರ್.ಎಫ್. ಸಣ್ಣಪ್ಪನವರ, ಟಿ.ಪಿ. ವಂಡಕರ, ಎಂ.ಎಂ. ಪಮ್ಮಾರ, ಜಿ.ಎಸ್. ಯಾದವಾಡ ಉಪಸ್ಥಿತರಿದ್ದರು. ನರಸಾಪುರ ಸಿಆರ್ಪಿ ಎಲ್.ಆರ್. ಪಮ್ಮಾರ ಸ್ವಾಗತಿಸಿದರು. ಎಂ.ಎಸ್. ಗಡೇಕಾರ ಕಾರ್ಯಕ್ರಮ ನಿರೂಪಿಸಿದರು. ಪಿ.ಎಂ. ಶಿವಕುಮಾರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಮದುರ್ಗ: ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಬೆಳೆಸಿಕೊಳ್ಳಲು ಇಂತಹ ಟಿಎಲ್ಎಂ ಮತ್ತು ಮೆಟ್ರಿಕ್ ಮೇಳಗಳು ಉಪಯುಕ್ತವಾಗಿವೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಮಹಾದೇವಿ ರೊಟ್ಟಿ ಹೇಳಿದರು. <br /> <br /> ನರಸಾಪುರ ಕ್ಲಸ್ಟರ್ ಮಟ್ಟದ ಟಿಎಲ್ಎಂ ಮತ್ತು ಮೆಟ್ರಿಕ್ ಮೇಳವನ್ನು ಚಿಲಮೂರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದ ಅವರು ಇಂಥ ಮೇಳಗಳು ಮಕ್ಕಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲಿವೆ ಎಂದರು.<br /> <br /> ಪುಸ್ತಕ ಜ್ಞಾನದ ಜೊತೆಗೆ ಮೇಳಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಉಪಯುಕ್ತ ಆಗಲಿವೆ. ಪ್ರಾಯೋಗಿಕ ಅನುಭವಕ್ಕೆ ಮೇಳಗಳು ಪೂರಕವಾಗಿ ಕೆಲಸ ಮಾಡುತ್ತವೆ ಎಂದು ಐಇಆರ್ಟಿ ಆರ್.ಎಸ್. ಸಂಕಣ್ಣವರ ಮತ್ತು ಸಿಆರ್ಪಿ ಆರ್.ಪಿ. ಬೆಟಗೇರಿ ಅಭಿಪ್ರಾಯಪಟ್ಟರು.<br /> <br /> ಮುಖ್ಯ ಶಿಕ್ಷಕಿ ಆರ್.ಎಫ್. ಸಣ್ಣಪ್ಪನವರ, ಟಿ.ಪಿ. ವಂಡಕರ, ಎಂ.ಎಂ. ಪಮ್ಮಾರ, ಜಿ.ಎಸ್. ಯಾದವಾಡ ಉಪಸ್ಥಿತರಿದ್ದರು. ನರಸಾಪುರ ಸಿಆರ್ಪಿ ಎಲ್.ಆರ್. ಪಮ್ಮಾರ ಸ್ವಾಗತಿಸಿದರು. ಎಂ.ಎಸ್. ಗಡೇಕಾರ ಕಾರ್ಯಕ್ರಮ ನಿರೂಪಿಸಿದರು. ಪಿ.ಎಂ. ಶಿವಕುಮಾರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>