ರಾಮದುರ್ಗ: ಸಮಾಜಕ್ಕೆ ಎದುರಾಗುವ ಸಂಕಷ್ಟಗಳನ್ನು ದೂರ ಮಾಡಲು ಯಜ್ಞ ಯಾಗಾದಿಗಳನ್ನು ಮಾಡಲಾಗತ್ತಿದೆ ಎಂದು ಎಂದು ಮಾಜಿ ಶಾಸಕ ಎನ್. ವಿ. ಪಾಟೀಲ ಹೇಳಿದರು.
ಪಟ್ಟಣದ ಶಂಕರಮಠದಲ್ಲಿ ನಡೆಯುತ್ತಿರುವ ರಜತ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಕೆಲ ಮಾನಸಿಕ ಸೀಮಿತ ಕಳೆದುಕೊಂಡವರು ಆಧ್ಯಾತ್ಮದ ಕುರಿತು ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತಿರುದ್ದಾರೆ ಎಂದು ವಿಷಾದ ಪಡೆಸಿದರು.
ಭಾರತ ದೇಶದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನ ಮಾನ ನೀಡಿ ಗೌರವಿಸಿದ ಕೀರ್ತಿ ಶಂಕರಾಚಾರ್ಯರಿಗೆ ಸಲ್ಲುತ್ತದೆ. ಹೀಗಾಗಿಯೇ ನಾಲ್ಕು ಕಡೆಗಳಲ್ಲಿ ಸ್ತ್ರೀಪೀಠಗಳನ್ನು ಸ್ಥಾಪಿಸಿದ್ದಾರೆ.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಪೂಜಾರಿ ಮಾತನಾಡಿ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಇಲ್ಲಿನ ಶ್ರೀಶಂಕರ ಮಠದಲ್ಲಿ ಏನೋ ಶಕ್ತಿ ಅಡಗಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಅವರು ನುಡಿದರು.
ಮನುಷ್ಯ ಯಾವುದೇ ಸಾಧನೆ ಮಾಡಿದರೂ ಮನುಷ್ಯ ಶಕ್ತಿಗೆ ಮೀರಿ ದೈವ ಶಕ್ತಿ ಇರುತ್ತದೆ. ಆ ನಿಟ್ಟಿನಲ್ಲಿ ಅದನ್ನು ಪಡೆಯಲು ಆಧ್ಯಾತ್ಮಿಕತೆಬೇಕು. ವಾತಾವರಣ ಶುದ್ಧೀಕರಣಕ್ಕೆ ಹೋಮ ಹವನಗಳು ನಡೆಯಬೇಕು ಎಂದು ಅವರು ತಿಳಿಸಿದರು.
ಜೆಡಿಎಸ್ ಮುಖಂಡರಾದ ಬಸವರಾಜ ಹಿರೇರಡ್ಡಿ, ಶಿದ್ಲಿಂಗಪ್ಪ ಮುದೇನೂರ, ರಮೇಶ ದೇಶಪಾಂಡೆ ಹಾಜರಿದ್ದರು. ಚಿದಂಬರ ಇನಾಮದಾರ ಕಾರ್ಯಕ್ರಮ ನಿರೂಪಿದರು.