ಹೊಸಪೇಟೆ: ತಾಲ್ಲೂಕಿನ ಗಾಳೆಮ್ಮನಗುಡಿ ಬಳಿ ಶುಕ್ರವಾರ ನಸುಕಿನ ಜಾವ ಚಕ್ಕಡಿಗೆ ಮಿನಿ ಬಸ್ ಡಿಕ್ಕಿ ಹೊಡೆದಿದ್ದರಿಂದ ಹಳೆ ಮಲಪನಗುಡಿಯ ರಾಘವೇಂದ್ರ (35) ಮೃತಪಟ್ಟಿದ್ದಾರೆ.
‘ರಾಘವೇಂದ್ರ ಅವರು ಹೊಸ ಮಲಪನಗುಡಿಯಿಂದ ಹಳೆ ಮಲಪನಗುಡಿಗೆ ಹೋಗುವಾಗ ಮಿನಿ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ತೀವ್ರ ರಕ್ತಸ್ರಾವವಾಗಿ ರಾಘವೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್ಸಿನ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.