<p><strong>ಬಳ್ಳಾರಿ:</strong> ಜಿಲ್ಲೆಯ ಅಂಗವಿಕಲರಿಗೆ ಜಿಲ್ಲಾಡಳಿತವು ‘ಆಶಾಕಿರಣ’ ವಿಶೇಷ ಮಾಸಿಕ ಪಿಂಚಣಿ ಯೋಜನೆಯನ್ನು ರೂಪಿಸಿದ್ದು, ಜಿಲ್ಲಾ ಖನಿಜ ನಿಧಿಯ ಮೂಲಕ ಸಂಡೂರು ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುತ್ತಿದೆ.</p>.<p>ಅಂಗವಿಕಲರ ಆರೋಗ್ಯವನ್ನು ಉತ್ತಪಡಿಸಿಕೊಳ್ಳಲು ನೆರವಾಗುವುದೇ ಯೋಜನೆಯ ಪ್ರಮುಖ ಉದ್ದೇಶ. ಜಿಲ್ಲೆಯಲ್ಲಿ ಅತಿಹೆಚ್ಚು ಗಣಿಬಾಧಿತರಿರುವ ಸಂಡೂರು ತಾಲೂಕನ್ನುಮೊದಲಿಗೆ ಆಯ್ಕೆ ಮಡಲಾಗಿದ್ದು, ನಂತರ ಉಳಿದ ತಾಲ್ಲೂಕುಗಳಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದೆ.</p>.<p>ರಾಜ್ಯ ಸರ್ಕಾರವು ನೀಡುವ ಮಾಸಿಕ ಪಿಂಚಣಿ ಯೋಜನೆಯ ಜೊತೆಗೆ ‘ಆಶಾಕಿರಣ’ ಯೋಜನೆಯ ಮೂಲಕ ಮೂರು ವರ್ಷಗಳ ಕಾಲ ಅಂಗವಿಕಲರಿಗೆ ಹೆಚ್ಚುವರಿ ಮಾಸಿಕ ಪಿಂಚಣಿ ದೊರಕಲಿದೆ.</p>.<p>ಯಾರಿಗೆ ಎಷ್ಟು: ಸದ್ಯ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಶೇ 40ರಿಂದ ಶೇ.75ರವರೆಗೆ ಅಂಗವೈಕಲ್ಯ ಉಳ್ಳವರಿಗೆ ಮಾಸಿಕ ₹ 600 ನೀಡಲಾಗುತ್ತಿದೆ. ಹೊಸ ಯೋಜನೆ ಅಡಿ ಅವರಿಗೆ ಹೆಚ್ಚುವರಿಯಾಗಿ ₹ 500 ನೀಡಲಾಗುತ್ತದೆ. ಫಲಾನುಭವಿಗೆ ಒಟ್ಟು ₹ 1,100 ದೊರಕಲಿದೆ.</p>.<p>ಶೇ 75ಕ್ಕಿಂತ ಮೇಲ್ಪಟ್ಟ ಅಂಗವಿಕಲರಿಕೆ ಇಲಾಖೆಯು ₹ 1,400 ಪಿಂಚಣಿ ನೀಡುತ್ತಿದ್ದು, ಅದರೊಂದಿಗೆ ₹ 700 ಸೇರಿ ಒಟ್ಟು ಪಿಂಚಣಿ 2,100 ದೊರಕಲಿದೆ.</p>.<p><strong>3,408 ಅಂಗವಿಕಲರು:</strong> ಸಂಡೂರು ತಾಲೂಕಿನಲ್ಲಿ ಸದ್ಯ 3408 ಅಂಗವಿಕಲರಿದ್ದು, ಪಿಂಚಣಿ ಪಡೆಯುವ ಫಲಾನುಭವಿಗಳು ತಮ್ಮ ಆರೋಗ್ಯ ಸ್ಥಿತಿಯನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಲು ಬಳಸಿಕೊಳ್ಳಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ.</p>.<p>ಯೋಜನೆ ಕುರಿತು ಸಂಡೂರಿನಲ್ಲಿ ಫಲಾನುಭವಿಗಳಿಗೆ ತಿಳಿವಳಿಕೆ ಪತ್ರಗಳನ್ನು ವಿತರಿಸಲಾಗುತ್ತಿದೆ. ಹೆಚ್ಚುವರಿ ಮಾಸಿಕ ಪಿಂಚಣಿಯನ್ನು ಪಡೆಯಲು ಕಡ್ಡಾಯವಾಗಿ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಖಾತೆಯನ್ನು ಹೊಂದದಿರುವವರು ಕೂಡಲೇ ಹೊಸ ಉಳಿತಾಯ ಖಾತೆಯನ್ನು ತೆರೆದು ವಿವರವನ್ನು ಸಂಡೂರು ತಹಸೀಲ್ದಾರರ ಕಚೇರಿಗೆ ಸಲ್ಲಿಸಬೇಕು.</p>.<p>ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಹಾಗೂ ಅಂಚೆ ಇಲಾಖೆಯಲ್ಲಿ ಖಾತೆ ಹೊಂದಿರುವವರಿಗೆ ಮನಿಆರ್ಡರ್ ಮೂಲಕ ಹೆಚ್ಚುವರಿ ಮಾಸಿಕ ಪಿಂಚಣಿ ಹಣವನ್ನು ಜಮಾ ಮಾಡಲಾಗುತ್ತಿದೆ.</p>.<p>ಮಾಹಿತಿಗಾಗಿ ಆಸಕ್ತರು ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಂ: 08392-277100 ಮತ್ತು ಸಂಡೂರು ತಹಶೀಲ್ದಾರರ ಕಚೇರಿ: 08395-260241 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.</p>.<p>‘ಗಣಿಗಾರಿಕೆಯಿಂದ ಹೆಚ್ಚು ಬಾಧಿತರಾದ ಅಂಗವಿಕಲ ಸಮುದಾಯಕ್ಕಾಗಿಯೇ ಆಶಾಕಿರಣ ಯೋಜನೆಯನ್ನು ರೂಪಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ಜಿಲ್ಲೆಯ ಅಂಗವಿಕಲರಿಗೆ ಜಿಲ್ಲಾಡಳಿತವು ‘ಆಶಾಕಿರಣ’ ವಿಶೇಷ ಮಾಸಿಕ ಪಿಂಚಣಿ ಯೋಜನೆಯನ್ನು ರೂಪಿಸಿದ್ದು, ಜಿಲ್ಲಾ ಖನಿಜ ನಿಧಿಯ ಮೂಲಕ ಸಂಡೂರು ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುತ್ತಿದೆ.</p>.<p>ಅಂಗವಿಕಲರ ಆರೋಗ್ಯವನ್ನು ಉತ್ತಪಡಿಸಿಕೊಳ್ಳಲು ನೆರವಾಗುವುದೇ ಯೋಜನೆಯ ಪ್ರಮುಖ ಉದ್ದೇಶ. ಜಿಲ್ಲೆಯಲ್ಲಿ ಅತಿಹೆಚ್ಚು ಗಣಿಬಾಧಿತರಿರುವ ಸಂಡೂರು ತಾಲೂಕನ್ನುಮೊದಲಿಗೆ ಆಯ್ಕೆ ಮಡಲಾಗಿದ್ದು, ನಂತರ ಉಳಿದ ತಾಲ್ಲೂಕುಗಳಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದೆ.</p>.<p>ರಾಜ್ಯ ಸರ್ಕಾರವು ನೀಡುವ ಮಾಸಿಕ ಪಿಂಚಣಿ ಯೋಜನೆಯ ಜೊತೆಗೆ ‘ಆಶಾಕಿರಣ’ ಯೋಜನೆಯ ಮೂಲಕ ಮೂರು ವರ್ಷಗಳ ಕಾಲ ಅಂಗವಿಕಲರಿಗೆ ಹೆಚ್ಚುವರಿ ಮಾಸಿಕ ಪಿಂಚಣಿ ದೊರಕಲಿದೆ.</p>.<p>ಯಾರಿಗೆ ಎಷ್ಟು: ಸದ್ಯ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಶೇ 40ರಿಂದ ಶೇ.75ರವರೆಗೆ ಅಂಗವೈಕಲ್ಯ ಉಳ್ಳವರಿಗೆ ಮಾಸಿಕ ₹ 600 ನೀಡಲಾಗುತ್ತಿದೆ. ಹೊಸ ಯೋಜನೆ ಅಡಿ ಅವರಿಗೆ ಹೆಚ್ಚುವರಿಯಾಗಿ ₹ 500 ನೀಡಲಾಗುತ್ತದೆ. ಫಲಾನುಭವಿಗೆ ಒಟ್ಟು ₹ 1,100 ದೊರಕಲಿದೆ.</p>.<p>ಶೇ 75ಕ್ಕಿಂತ ಮೇಲ್ಪಟ್ಟ ಅಂಗವಿಕಲರಿಕೆ ಇಲಾಖೆಯು ₹ 1,400 ಪಿಂಚಣಿ ನೀಡುತ್ತಿದ್ದು, ಅದರೊಂದಿಗೆ ₹ 700 ಸೇರಿ ಒಟ್ಟು ಪಿಂಚಣಿ 2,100 ದೊರಕಲಿದೆ.</p>.<p><strong>3,408 ಅಂಗವಿಕಲರು:</strong> ಸಂಡೂರು ತಾಲೂಕಿನಲ್ಲಿ ಸದ್ಯ 3408 ಅಂಗವಿಕಲರಿದ್ದು, ಪಿಂಚಣಿ ಪಡೆಯುವ ಫಲಾನುಭವಿಗಳು ತಮ್ಮ ಆರೋಗ್ಯ ಸ್ಥಿತಿಯನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಲು ಬಳಸಿಕೊಳ್ಳಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ.</p>.<p>ಯೋಜನೆ ಕುರಿತು ಸಂಡೂರಿನಲ್ಲಿ ಫಲಾನುಭವಿಗಳಿಗೆ ತಿಳಿವಳಿಕೆ ಪತ್ರಗಳನ್ನು ವಿತರಿಸಲಾಗುತ್ತಿದೆ. ಹೆಚ್ಚುವರಿ ಮಾಸಿಕ ಪಿಂಚಣಿಯನ್ನು ಪಡೆಯಲು ಕಡ್ಡಾಯವಾಗಿ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಖಾತೆಯನ್ನು ಹೊಂದದಿರುವವರು ಕೂಡಲೇ ಹೊಸ ಉಳಿತಾಯ ಖಾತೆಯನ್ನು ತೆರೆದು ವಿವರವನ್ನು ಸಂಡೂರು ತಹಸೀಲ್ದಾರರ ಕಚೇರಿಗೆ ಸಲ್ಲಿಸಬೇಕು.</p>.<p>ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಹಾಗೂ ಅಂಚೆ ಇಲಾಖೆಯಲ್ಲಿ ಖಾತೆ ಹೊಂದಿರುವವರಿಗೆ ಮನಿಆರ್ಡರ್ ಮೂಲಕ ಹೆಚ್ಚುವರಿ ಮಾಸಿಕ ಪಿಂಚಣಿ ಹಣವನ್ನು ಜಮಾ ಮಾಡಲಾಗುತ್ತಿದೆ.</p>.<p>ಮಾಹಿತಿಗಾಗಿ ಆಸಕ್ತರು ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಂ: 08392-277100 ಮತ್ತು ಸಂಡೂರು ತಹಶೀಲ್ದಾರರ ಕಚೇರಿ: 08395-260241 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.</p>.<p>‘ಗಣಿಗಾರಿಕೆಯಿಂದ ಹೆಚ್ಚು ಬಾಧಿತರಾದ ಅಂಗವಿಕಲ ಸಮುದಾಯಕ್ಕಾಗಿಯೇ ಆಶಾಕಿರಣ ಯೋಜನೆಯನ್ನು ರೂಪಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>