ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ವಿವಿ ಆವರಣದಲ್ಲಿ ಗಂಧದ ಮರ ಕಳವಿಗೆ ಯತ್ನ

Last Updated 12 ಮೇ 2020, 14:31 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಬೆಳೆದಿರುವ ಗಂಧದ ಮರಗಳನ್ನು ಕಡಿದು ಕದ್ದೊಯ್ಯುವ ವಿಫಲ ಯತ್ನ ಕಳ್ಳರು ನಡೆಸಿದ್ದಾರೆ.

‘ವಿಶ್ವವಿದ್ಯಾಲಯದ ‘ಬಿ’ ಗೇಟ್‌ನಿಂದ 300 ಮೀಟರ್‌ ದೂರದಲ್ಲಿ ಶನಿವಾರ ರಾತ್ರಿ ಬೆಲೆಬಾಳುವ ಗಂಧದ ಮರಗಳನ್ನು ಕಳ್ಳರು ಕಡಿದಿದ್ದಾರೆ. ಬಳಿಕ ಅವುಗಳನ್ನು ಹೊತ್ತೊಯ್ಯಲಾಗದೇ ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಭಾನುವಾರ ರಜೆ ಇದ್ದದ್ದರಿಂದ ಸಿ.ಸಿ.ಟಿ.ವಿ. ನೋಡಿರಲಿಲ್ಲ. ಸೋಮವಾರ ನೋಡಿದಾಗ ಕಳ್ಳರು ಮರ ಕಡಿದಿರುವುದು ಗೊತ್ತಾಗಿ ಕುಲಸಚಿವ ಎ. ಸುಬ್ಬಣ್ಣ ರೈ ಅವರು ಮಂಗಳವಾರ ಕಮಲಾಪುರ ಪೊಲೀಸ್‌ ಠಾಣೆಗೆ ದೂರು ಕೊಟ್ಟಿದ್ದು, ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT