‘ವಿಶ್ವವಿದ್ಯಾಲಯದ ‘ಬಿ’ ಗೇಟ್ನಿಂದ 300 ಮೀಟರ್ ದೂರದಲ್ಲಿ ಶನಿವಾರ ರಾತ್ರಿ ಬೆಲೆಬಾಳುವ ಗಂಧದ ಮರಗಳನ್ನು ಕಳ್ಳರು ಕಡಿದಿದ್ದಾರೆ. ಬಳಿಕ ಅವುಗಳನ್ನು ಹೊತ್ತೊಯ್ಯಲಾಗದೇ ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಭಾನುವಾರ ರಜೆ ಇದ್ದದ್ದರಿಂದ ಸಿ.ಸಿ.ಟಿ.ವಿ. ನೋಡಿರಲಿಲ್ಲ. ಸೋಮವಾರ ನೋಡಿದಾಗ ಕಳ್ಳರು ಮರ ಕಡಿದಿರುವುದು ಗೊತ್ತಾಗಿ ಕುಲಸಚಿವ ಎ. ಸುಬ್ಬಣ್ಣ ರೈ ಅವರು ಮಂಗಳವಾರ ಕಮಲಾಪುರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು, ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.