ಘಟನೆಯನ್ನು ಕಣ್ಣಾರೆ ಕಂಡ ಮಹಿಳೆಯರು ಜೋರಾಗಿ ಚೀರಾಡಿದ್ದಾರೆ. ಅದರಿಂದ ಬೆದರಿದ ಚಿರತೆ ಬಾಲಕಿಯನ್ನು ಹೊಲದಲ್ಲಿಯೇ ಬಿಟ್ಟು ಕಣ್ಮರೆಯಾಗಿದೆ. ಚಿಕಿತ್ಸೆಗೆ ಕಂಪ್ಲಿಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿಯೇ ಬಾಲಕಿ ಅಸುನೀಗಿದ್ದಾಳೆ. ಮಂಗಳವಾರ ಕ್ರಿಸ್ಮಸ್ ನಿಮಿತ್ತ ಶಾಲೆಗೆ ರಜೆ ಇದ್ದರಿಂದ ಕುಟುಂದವರೊಂದಿಗೆ ಬಾಲಕಿ ಹತ್ತಿ ಹೊಲಕ್ಕೆ ತೆರಳಿದ್ದಳು.