ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಕಾರ್ಯಕರ್ತರಿಂದ ಬೈಕ್‌ ರ್‍ಯಾಲಿ

Last Updated 20 ಏಪ್ರಿಲ್ 2019, 14:32 IST
ಅಕ್ಷರ ಗಾತ್ರ

ಹೊಸಪೇಟೆ: ಕಾಂಗ್ರೆಸ್‌ ಕಾರ್ಯಕರ್ತರು ಶನಿವಾರ ಸಂಜೆ ನಗರದಲ್ಲಿ ಬೈಕ್‌ ರ್‍ಯಾಲಿ ನಡೆಸಿ, ಪಕ್ಷದ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪನವರ ಪರ ಮತ ಯಾಚಿಸಿದರು.

ಟಿ.ಬಿ. ಡ್ಯಾಂ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದ ಬಳಿ ರ್‍ಯಾಲಿಗೆ ಮಾಜಿ ಶಾಸಕ ರತನ್‌ ಸಿಂಗ್‌ ಚಾಲನೆ ನೀಡಿದರು. ಅಲ್ಲಿಂದ ಆರಂಭವಾದ ರ್‍ಯಾಲಿ ಸಾಯಿಬಾಬಾ ವೃತ್ತ, ವಾಲ್ಮೀಕಿ ವೃತ್ತ, ಮದಕರಿ ನಾಯಕ ವೃತ್ತ, ಮೂರಂಗಡಿ ವೃತ್ತ, ಮೇನ್‌ ಬಜಾರ್‌, ಬಳ್ಳಾರಿ ರಸ್ತೆ ವೃತ್ತ, ಹಂಪಿ ರಸ್ತೆ, ಎಂ.ಪಿ. ಪ್ರಕಾಶ ನಗರ, ಕನಕದಾಸ ವೃತ್ತ, ರೋಟರಿ ವೃತ್ತದ ಮೂಲಕ ಹಾದು ಪಟೇಲ್‌ ನಗರದಲ್ಲಿ ಕೊನೆಗೊಂಡಿತು.

ಕಾಂಗ್ರೆಸ್‌ ಧ್ವಜಗಳೊಂದಿಗೆರ್‍ಯಾಲಿಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ‘ರಾಹುಲ್‌ ಗಾಂಧಿಗೆ ಜಯವಾಗಲಿ’, ‘ಕಾಂಗ್ರೆಸ್‌ ಪಕ್ಷಕ್ಕೆ ಜಯವಾಗಲಿ, ‘ಉಗ್ರಪ್ಪನವರಿಗೆ ಜಯವಾಗಲಿ’ ಎಂದು ಘೋಷಣೆಗಳನ್ನು ಕೂಗಿದರು.

ಸಚಿವ ಡಿ.ಕೆ. ಶಿವಕುಮಾರ, ಉಗ್ರಪ್ಪ ರ್‍ಯಾಲಿಗೆ ಗೈರು ಹಾಜರಾಗಿದ್ದರು. ಮುಖಂಡರಾದಅಬ್ದುಲ್ ವಹಾಬ್, ರತನ್ ಸಿಂಗ್, ಅಮಾಜಿ ಹೇಮಣ್ಣ, ಟಿಂಕರ್‌ ರಫೀಕ್‌, ನಿಂಬಗಲ್‌ ರಾಮಕೃಷ್ಣ, ಸಂದೀಪ್‌ ಸಿಂಗ್‌, ಮಧುರಚೆನ್ನ ಶಾಸ್ತ್ರಿ, ಗುಜ್ಜಲ್‌ ನಾಗರಾಜ್, ತಾರಿಹಳ್ಳಿ ವೆಂಕಟೇಶ, ಜಂಬುನಾಥ, ಕವಿತಾ ಈಶ್ವರ್‌ ಸಿಂಗ್‌, ಭಾಗ್ಯಲಕ್ಷ್ಮಿ ಭರಾಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT