ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲದಲ್ಲೇ ಮಲಗಿದ್ದ ಸೋಂಕಿತರು!

ಕೋವಿಡ್‌ ಚಿಕಿತ್ಸಾ ಕೇಂದ್ರದಲ್ಲಿ ಅವ್ಯವಸ್ಥೆ; ಮನೆಗೆ ಕಳುಹಿಸಿಕೊಡುವಂತೆ ಆಗ್ರಹ
Last Updated 17 ಜುಲೈ 2020, 5:07 IST
ಅಕ್ಷರ ಗಾತ್ರ

ಮೈಸೂರು: ಮೈಸೂರಿನ ಇಎಸ್‌ಐ ಆಸ್ಪತ್ರೆಯಲ್ಲಿರುವ ಕೋವಿಡ್‌ ಚಿಕಿತ್ಸಾ ಕೇಂದ್ರದಲ್ಲಿ ಸರಿಯಾದ ಸೌಲಭ್ಯವಿಲ್ಲದೇ ಸೋಂಕಿತರು ಪರದಾಡುತ್ತಿದ್ದು, ಮನೆಗೆ ಕಳುಹಿಸಿಕೊಡುವಂತೆ ಪಟ್ಟು ಹಿಡಿದಿದ್ದಾರೆ.

ಆಸ್ಪತ್ರೆಗೆ ಬಂದಾಗ ಹಾಸಿಗೆ ಕಲ್ಪಿಸದ ಕಾರಣ ಕೆಲವರು ನೆಲದ ಮೇಲೆಯೇ ಮಲಗಿ ಕಾಲ ಕಳೆದಿದ್ದಾರೆ.ಅವ್ಯವಸ್ಥೆಯ ವಿಡಿಯೊ ಮಾಡಿರುವ ಸೋಂಕಿತರು, ಅದನ್ನು ‘ಪ್ರಜಾವಾಣಿ’ಗೆ ಕಳುಹಿಸಿಕೊಟ್ಟಿದ್ದಾರೆ.

ಜಿಲ್ಲಾ ಕೋವಿಡ್‌ ಆಸ್ಪತ್ರೆ ಭರ್ತಿಯಾದ ಕಾರಣ, ಗಂಭೀರ ಲಕ್ಷಣಗಳು ಇಲ್ಲದ ಸೋಂಕಿತರನ್ನು ಈ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ 70 ಮಂದಿ ಇದ್ದಾರೆ.

‘ಒಂದೇ ಕೊಠಡಿಯಲ್ಲಿ 20 ಮಹಿಳೆಯರನ್ನು ತುಂಬಿದ್ದು, ಸ್ವಚ್ಛಗೊಳಿಸುವವರೇ ಇಲ್ಲ. ಎರಡು ಶೌಚಾಲಯಗಳಿದ್ದು, ಗಬ್ಬು ನಾರುತ್ತಿವೆ. ಸರಿಯಾಗಿ ನೀರೂ ಇಲ್ಲ. ಈ ಕೇಂದ್ರಕ್ಕೆ ಬಂದ ಮೇಲೆ ನೆಗಡಿ, ಕೆಮ್ಮು ಶುರುವಾಗಿದೆ’ ಎಂದು ಸೋಂಕಿತರೊಬ್ಬರು ದೂರಿದರು.

‘ಸರಿಯಾಗಿ ಔಷಧ ಕೊಡುತ್ತಿಲ್ಲ. ಸಮಸ್ಯೆ ಇಲ್ಲದವರಿಗೆ ಚಿಕಿತ್ಸೆ ಏಕೆ ಎಂದು ಕೇಳುತ್ತಾರೆ. ಹಾಗಾದರೆ ನಮ್ಮನ್ನು ಮನೆಗೆ ಕಳಿಸಲಿ. ಇಲ್ಲೇಕೆ ಇಟ್ಟುಕೊಂಡಿದ್ದಾರೆ’ ಎಂದು ಪ್ರಶ್ನಿಸಿದರು.

‘ಕಂಟೈನ್‌ಮೆಂಟ್‌ ವಲಯದಲ್ಲಿ ಔಷಧ ಸಿಂಪಡಿಸುವಾಗ ನನಗೆ ಸೋಂಕು ತಗುಲಿರಬಹುದು. ಮೂರು ದಿನಗಳ ಹಿಂದೆ ಈ ಆಸ್ಪತ್ರೆಗೆ ಕರೆತಂದರು. ಇಲ್ಲಿಗೆ ಬಂದಾಗ ಹಾಸಿಗೆಗಳೇ ಇರಲಿಲ್ಲ. ಅಧಿಕಾರಿಗಳಿಗೆ ಕರೆ ಮಾಡಿದ ಮೇಲೆ ವ್ಯವಸ್ಥೆ ಮಾಡಿದರು’ ಎಂದು ಬನ್ನಿಮಂಟಪ‍ದಲ್ಲಿ ಕೆಲಸ ಮಾಡುವ ಗುತ್ತಿಗೆ ಪೌರಕಾರ್ಮಿಕರೊಬ್ಬರು ತಿಳಿಸಿದರು.

ಮಾಹಿತಿ ಇಲ್ಲ: ‘ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಸಣ್ಣಪುಟ್ಟ ವಿಚಾರ ಇರಬಹುದು. ಸ್ಥಳಕ್ಕೆ ಹೋಗಿ ಪರಿಶೀಲಿಸುತ್ತೇನೆ’ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ವೆಂಕಟೇಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT