<p><strong>ಮೈಸೂರು: </strong>ಮೈಸೂರಿನ ಇಎಸ್ಐ ಆಸ್ಪತ್ರೆಯಲ್ಲಿರುವ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ಸರಿಯಾದ ಸೌಲಭ್ಯವಿಲ್ಲದೇ ಸೋಂಕಿತರು ಪರದಾಡುತ್ತಿದ್ದು, ಮನೆಗೆ ಕಳುಹಿಸಿಕೊಡುವಂತೆ ಪಟ್ಟು ಹಿಡಿದಿದ್ದಾರೆ.</p>.<p>ಆಸ್ಪತ್ರೆಗೆ ಬಂದಾಗ ಹಾಸಿಗೆ ಕಲ್ಪಿಸದ ಕಾರಣ ಕೆಲವರು ನೆಲದ ಮೇಲೆಯೇ ಮಲಗಿ ಕಾಲ ಕಳೆದಿದ್ದಾರೆ.ಅವ್ಯವಸ್ಥೆಯ ವಿಡಿಯೊ ಮಾಡಿರುವ ಸೋಂಕಿತರು, ಅದನ್ನು ‘ಪ್ರಜಾವಾಣಿ’ಗೆ ಕಳುಹಿಸಿಕೊಟ್ಟಿದ್ದಾರೆ.</p>.<p>ಜಿಲ್ಲಾ ಕೋವಿಡ್ ಆಸ್ಪತ್ರೆ ಭರ್ತಿಯಾದ ಕಾರಣ, ಗಂಭೀರ ಲಕ್ಷಣಗಳು ಇಲ್ಲದ ಸೋಂಕಿತರನ್ನು ಈ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ 70 ಮಂದಿ ಇದ್ದಾರೆ.</p>.<p>‘ಒಂದೇ ಕೊಠಡಿಯಲ್ಲಿ 20 ಮಹಿಳೆಯರನ್ನು ತುಂಬಿದ್ದು, ಸ್ವಚ್ಛಗೊಳಿಸುವವರೇ ಇಲ್ಲ. ಎರಡು ಶೌಚಾಲಯಗಳಿದ್ದು, ಗಬ್ಬು ನಾರುತ್ತಿವೆ. ಸರಿಯಾಗಿ ನೀರೂ ಇಲ್ಲ. ಈ ಕೇಂದ್ರಕ್ಕೆ ಬಂದ ಮೇಲೆ ನೆಗಡಿ, ಕೆಮ್ಮು ಶುರುವಾಗಿದೆ’ ಎಂದು ಸೋಂಕಿತರೊಬ್ಬರು ದೂರಿದರು.</p>.<p>‘ಸರಿಯಾಗಿ ಔಷಧ ಕೊಡುತ್ತಿಲ್ಲ. ಸಮಸ್ಯೆ ಇಲ್ಲದವರಿಗೆ ಚಿಕಿತ್ಸೆ ಏಕೆ ಎಂದು ಕೇಳುತ್ತಾರೆ. ಹಾಗಾದರೆ ನಮ್ಮನ್ನು ಮನೆಗೆ ಕಳಿಸಲಿ. ಇಲ್ಲೇಕೆ ಇಟ್ಟುಕೊಂಡಿದ್ದಾರೆ’ ಎಂದು ಪ್ರಶ್ನಿಸಿದರು.</p>.<p>‘ಕಂಟೈನ್ಮೆಂಟ್ ವಲಯದಲ್ಲಿ ಔಷಧ ಸಿಂಪಡಿಸುವಾಗ ನನಗೆ ಸೋಂಕು ತಗುಲಿರಬಹುದು. ಮೂರು ದಿನಗಳ ಹಿಂದೆ ಈ ಆಸ್ಪತ್ರೆಗೆ ಕರೆತಂದರು. ಇಲ್ಲಿಗೆ ಬಂದಾಗ ಹಾಸಿಗೆಗಳೇ ಇರಲಿಲ್ಲ. ಅಧಿಕಾರಿಗಳಿಗೆ ಕರೆ ಮಾಡಿದ ಮೇಲೆ ವ್ಯವಸ್ಥೆ ಮಾಡಿದರು’ ಎಂದು ಬನ್ನಿಮಂಟಪದಲ್ಲಿ ಕೆಲಸ ಮಾಡುವ ಗುತ್ತಿಗೆ ಪೌರಕಾರ್ಮಿಕರೊಬ್ಬರು ತಿಳಿಸಿದರು.</p>.<p><strong>ಮಾಹಿತಿ ಇಲ್ಲ: </strong>‘ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಸಣ್ಣಪುಟ್ಟ ವಿಚಾರ ಇರಬಹುದು. ಸ್ಥಳಕ್ಕೆ ಹೋಗಿ ಪರಿಶೀಲಿಸುತ್ತೇನೆ’ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ವೆಂಕಟೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಮೈಸೂರಿನ ಇಎಸ್ಐ ಆಸ್ಪತ್ರೆಯಲ್ಲಿರುವ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ಸರಿಯಾದ ಸೌಲಭ್ಯವಿಲ್ಲದೇ ಸೋಂಕಿತರು ಪರದಾಡುತ್ತಿದ್ದು, ಮನೆಗೆ ಕಳುಹಿಸಿಕೊಡುವಂತೆ ಪಟ್ಟು ಹಿಡಿದಿದ್ದಾರೆ.</p>.<p>ಆಸ್ಪತ್ರೆಗೆ ಬಂದಾಗ ಹಾಸಿಗೆ ಕಲ್ಪಿಸದ ಕಾರಣ ಕೆಲವರು ನೆಲದ ಮೇಲೆಯೇ ಮಲಗಿ ಕಾಲ ಕಳೆದಿದ್ದಾರೆ.ಅವ್ಯವಸ್ಥೆಯ ವಿಡಿಯೊ ಮಾಡಿರುವ ಸೋಂಕಿತರು, ಅದನ್ನು ‘ಪ್ರಜಾವಾಣಿ’ಗೆ ಕಳುಹಿಸಿಕೊಟ್ಟಿದ್ದಾರೆ.</p>.<p>ಜಿಲ್ಲಾ ಕೋವಿಡ್ ಆಸ್ಪತ್ರೆ ಭರ್ತಿಯಾದ ಕಾರಣ, ಗಂಭೀರ ಲಕ್ಷಣಗಳು ಇಲ್ಲದ ಸೋಂಕಿತರನ್ನು ಈ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ 70 ಮಂದಿ ಇದ್ದಾರೆ.</p>.<p>‘ಒಂದೇ ಕೊಠಡಿಯಲ್ಲಿ 20 ಮಹಿಳೆಯರನ್ನು ತುಂಬಿದ್ದು, ಸ್ವಚ್ಛಗೊಳಿಸುವವರೇ ಇಲ್ಲ. ಎರಡು ಶೌಚಾಲಯಗಳಿದ್ದು, ಗಬ್ಬು ನಾರುತ್ತಿವೆ. ಸರಿಯಾಗಿ ನೀರೂ ಇಲ್ಲ. ಈ ಕೇಂದ್ರಕ್ಕೆ ಬಂದ ಮೇಲೆ ನೆಗಡಿ, ಕೆಮ್ಮು ಶುರುವಾಗಿದೆ’ ಎಂದು ಸೋಂಕಿತರೊಬ್ಬರು ದೂರಿದರು.</p>.<p>‘ಸರಿಯಾಗಿ ಔಷಧ ಕೊಡುತ್ತಿಲ್ಲ. ಸಮಸ್ಯೆ ಇಲ್ಲದವರಿಗೆ ಚಿಕಿತ್ಸೆ ಏಕೆ ಎಂದು ಕೇಳುತ್ತಾರೆ. ಹಾಗಾದರೆ ನಮ್ಮನ್ನು ಮನೆಗೆ ಕಳಿಸಲಿ. ಇಲ್ಲೇಕೆ ಇಟ್ಟುಕೊಂಡಿದ್ದಾರೆ’ ಎಂದು ಪ್ರಶ್ನಿಸಿದರು.</p>.<p>‘ಕಂಟೈನ್ಮೆಂಟ್ ವಲಯದಲ್ಲಿ ಔಷಧ ಸಿಂಪಡಿಸುವಾಗ ನನಗೆ ಸೋಂಕು ತಗುಲಿರಬಹುದು. ಮೂರು ದಿನಗಳ ಹಿಂದೆ ಈ ಆಸ್ಪತ್ರೆಗೆ ಕರೆತಂದರು. ಇಲ್ಲಿಗೆ ಬಂದಾಗ ಹಾಸಿಗೆಗಳೇ ಇರಲಿಲ್ಲ. ಅಧಿಕಾರಿಗಳಿಗೆ ಕರೆ ಮಾಡಿದ ಮೇಲೆ ವ್ಯವಸ್ಥೆ ಮಾಡಿದರು’ ಎಂದು ಬನ್ನಿಮಂಟಪದಲ್ಲಿ ಕೆಲಸ ಮಾಡುವ ಗುತ್ತಿಗೆ ಪೌರಕಾರ್ಮಿಕರೊಬ್ಬರು ತಿಳಿಸಿದರು.</p>.<p><strong>ಮಾಹಿತಿ ಇಲ್ಲ: </strong>‘ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಸಣ್ಣಪುಟ್ಟ ವಿಚಾರ ಇರಬಹುದು. ಸ್ಥಳಕ್ಕೆ ಹೋಗಿ ಪರಿಶೀಲಿಸುತ್ತೇನೆ’ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ವೆಂಕಟೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>