ಬಳ್ಳಾರಿ: ಅಹಮದಾಬಾದ್ನಿಂದ ವಾಪಸಾದ ಹರಪನಹಳ್ಳಿ ಮೂಲದ ವ್ಯಕ್ತಿಯೊಬ್ಬರಿಗೆ ಶುಕ್ರವಾರ ಮಧ್ಯರಾತ್ರಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದ್ದು, ಶನಿವಾರ ಬೆಳಗಿನ ಜಾವ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹರಪನಹಳ್ಳಿಗೆ ವಾಪಸಾದ ವಾಹನದಲ್ಲಿದ್ದ ಮೂವರು ಮತ್ತು ಇಬ್ಬರು ಚಾಲಕರನ್ನು ಹಡಗಲಿ ಚೆಕ್ ಪೋಸ್ಟ್ನಲ್ಲಿ ಮಧ್ಯರಾತ್ರಿ ತಡೆದು ತೋರಣಗಲ್ನ ಕ್ವಾರಂಟೈನ್ ಕೇಂದ್ರಕ್ಕೆ ಕಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.