‘ನಿಶ್ಚಿತ ಗುರಿ ಇಟ್ಟುಕೊಂಡು ಕೆಲಸ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ. ಜೀವನದಲ್ಲಿ ಏರುಪೇರು ಸಾಮಾನ್ಯ. ಆದರೆ, ಅದಕ್ಕೆ ಕುಗ್ಗಬಾರದು. ನಾನು ಪಿಯುಸಿಯಲ್ಲಿ ಶೇ 99.72 ಅಂಕ ಗಳಿಸಿದ್ದೆ. ಎಂಜಿನಿಯರಿಂಗ್ನಲ್ಲಿ ನನ್ನ ಫಲಿತಾಂಶ ಶೇ 63 ಬಂತು. ನನಗೆ ಉತ್ತಮ ನೌಕರಿ ಸಿಗಲಿಲ್ಲ. ಆದರೆ, ನಾನು ಅದಕ್ಕೆ ಕುಗ್ಗಲಿಲ್ಲ. ದೆಹಲಿಗೆ ಹೋಗಿ ಐಎಎಸ್ ಪರೀಕ್ಷೆಗೆ ಕಷ್ಟಪಟ್ಟು ಓದಿದೆ. ಇಡೀ ದೇಶಕ್ಕೆ 53ನೇ ರ್ಯಾಂಕ್ ಗಳಿಸಿದೆ’ ಎಂದರು.