ಹೊಸಪೇಟೆ (ವಿಜಯನಗರ): ನಗರದಲ್ಲಿ ಭಾನುವಾರ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕ ಉದ್ಘಾಟಿಸಲಾಯಿತು.
ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ್ ಪೂಜಾರಿ ಮಾತನಾಡಿ, ಸಂಘಟನೆ ಕಟ್ಟುವ ಜೊತೆಗೆ ವಿದ್ಯಾರ್ಥಿಗಳು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಬೆಳೆಯುವುದು ಬಹಳ ಮುಖ್ಯ ಎಂದರು.
ದಲಿತ ವಿದ್ಯಾರ್ಥಿ ಪರಿಷತ್ತಿನ ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಎಲ್. ಶಾರದಾ, ಹರಪನಹಳ್ಳಿ ತಾಲ್ಲೂಕು ಸಂಚಾಲಕ ಪ್ರತಾಪ್ ಚಲವಾದಿ, ಕೊಟ್ಟೂರು ತಾಲ್ಲೂಕು ಸಂಚಾಲಕ ಶಿವಕುಮಾರ್, ತಂಬ್ರಹಳ್ಳಿ ಹೋಬಳಿ ಘಟಕದ ಸಂಚಾಲಕ ಸ್ಥಾನಕ್ಕೆ ದಾದಾ ಕಲಂದರ್ ಆಯ್ಕೆಯಾದರು.
ಶಬ್ಬೀರ್ ಎಚ್., ವಲಿ ಬಾಷ, ಶೈಲಜಾ, ಬಾಲಾಜಿ ಎಂ. ಕಾಂಬಳೆ, ರಾಜೇಂದ್ರ ವರ್ಮಾ, ಆನಂದ್ ಮದ್ದೂರು, ಹನುಮೇಶ್ ಇದ್ದರು.