ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಬಂಗಲೆ ಹಿಂಭಾಗ, ಬಸವ ಕಾಲುವೆಯ ಬಳಿ ಪ್ರಚಾರ ನಡೆಸಿದರು. ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸಿಂಗ್ ಬಂಗಲೆ ಎದುರು ಎಷ್ಟೊಂದು ಸ್ವಚ್ಛವಾಗಿದೆ. ಸುಂದರವಾದ ಉದ್ಯಾನ, ಅಚ್ಚುಕಟ್ಟಿನ ಚರಂಡಿ ವ್ಯವಸ್ಥೆ ಇದೆ. ಒಂದಿಂಚೂ ಕಸ ಇಲ್ಲ. ಇಡೀ ಊರು ಹೀಗಿದ್ದರೆ ಎಷ್ಟೊಂದು ಸುಂದರವಾಗಿರುತ್ತಿತ್ತು. ಅವರು ಸ್ವಾರ್ಥಿ ಎನ್ನುವುದಕ್ಕೆ ಇದೊಂದೆ ಸಾಕ್ಷಿ’ ಎಂದು ಟೀಕಿಸಿದರು.