ಬಳಿಕ ಮಾತನಾಡಿದ ಜಿ.ಶೀನಯ್ಯ, ‘ಪ್ರಯಾಣಿಕರು, ವಿದ್ಯಾರ್ಥಿಗಳ ಸಮಸ್ಯೆ ತಿಳಿಯಲು ಫೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗದಲ್ಲೇ ಮೊದಲ ನೇರ ಫೋನ್ ಕಾರ್ಯಕ್ರಮ ಅನುಷ್ಠಾನಗೊಳಿಸಿ ಆರಂಭಿಸಿದ ವಿಭಾಗ ನಮ್ಮದಾಗಿದೆ. ಪ್ರತಿ ತಿಂಗಳ ಎರಡನೇ ಬುಧವಾರ ಫೋನ್ ಇನ್ ನಡೆಯಲಿದೆ’ ಎಂದು ತಿಳಿಸಿದರು.