ಗ್ರಾಮದ ಈಶ್ವರ ದೇವಸ್ಥಾನದ ಹತ್ತಿರ ರಾತ್ರಿ 8ರ ವೇಳೆಗೆ ಸ್ನೇಹಿತರ ಜೊತೆ ಆಟವಾಡುತ್ತಿದ್ದ ಬಾಲಕಿ ನಾಪತ್ತೆಯಾಗಿದ್ದಾಳೆಎಂದು ತಂದೆ ಅಗಸರ ರೇವಣ್ಣ ತೋರಣಗಲ್ ಠಾಣೆಗೆ ದೂರು ನೀಡಿದ್ದರು. ಪಿಎಸ್ಐ ಮಹೇಶಗೌಡ ಅವರು, ಗ್ರಾಮಕ್ಕೆ ರಾತ್ರಿ ಭೇಟಿ ನೀಡಿ ಪಾಲಕರನ್ನು ವಿಚಾರಿಸಿ, ಗ್ರಾಮ ಸೇರಿದಂತೆ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣದಲ್ಲಿಶೋಧ ನಡೆಸಿದ್ದರು. ಮೃತದೇಹ ಪತ್ತೆಯದ ಸ್ಥಳಕ್ಕೆ ಬಳ್ಳಾರಿಯಿಂದ ಶ್ವಾನದಳವನ್ನು ಕರೆಸಲಾಗಿತ್ತು.