ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಕುಸ್ತಿಯಲ್ಲಿ ಗೆದ್ದರೆ ‘ಹಂಪಿ ಕೇಸರಿ ಬಿರುದು’

ಹಂಪಿ ಉತ್ಸವದಲ್ಲಿ ಕಲ್ಲುಗುಂಡು ಎತ್ತುವ ಸ್ಪರ್ಧೆ
Last Updated 7 ಜನವರಿ 2020, 15:56 IST
ಅಕ್ಷರ ಗಾತ್ರ

ಹೊಸಪೇಟೆ: ‘ಹಂಪಿ ಉತ್ಸವ’ದ ಪ್ರಯುಕ್ತ ಜ. 11ರಂದು ಕುಸ್ತಿ ಹಾಗೂ ಕಲ್ಲು ಗುಂಡು ಎತ್ತುವ ಸ್ಪರ್ಧೆ ಆಯೋಜಿಸಲಾಗಿದೆ.

74 ಕೆ.ಜಿ. ಗಿಂತ ಹೆಚ್ಚಿನ ತೂಕದ ರಾಜ್ಯ ಕುಸ್ತಿ ಸ್ಪರ್ಧೆಯಲ್ಲಿ ಜಯಗಳಿಸಿದವರಿಗೆ ₹35,000 ನಗದು, ‘ಹಂಪಿ ಕೇಸರಿ’ ಬಿರುದು ನೀಡಲಾಗುತ್ತದೆ. ₹20,000 ನಗದು ದ್ವಿತೀಯ, ₹10,000 ನಗದು ತೃತೀಯ ಬಹುಮಾನವಿದೆ.

57 ಕೆ.ಜಿ, 57ರಿಂದ 61 ಕೆ.ಜಿ., 61ರಿಂದ 65 ಕೆ.ಜಿ., 65ರಿಂದ 74 ಕೆ.ಜಿ. ವಿಭಾದಲ್ಲಿ ಗೆದ್ದವರಿಗೆ ₹20,000 ನಗದು ಪ್ರಥಮ, ₹10,000 ನಗದು ದ್ವಿತೀಯ ಹಾಗೂ ₹5,000 ನಗದು ತೃತೀಯ ಬಹುಮಾನ ಇದೆ.

ರಾಜ್ಯ ಮಹಿಳೆಯರ ಕುಸ್ತಿ ಸ್ಪರ್ಧೆಯು 50ರಿಂದ 55 ಕೆ.ಜಿ, 55 ಕೆ.ಜಿ, 59 ಕೆ.ಜಿ.ಗಿಂತ ಹೆಚ್ಚಿನ ತೂಕದ ಸ್ಪರ್ಧೆ ಆಯೋಜಿಸಲಾಗಿದ್ದು, ₹20,000 ನಗದು ಪ್ರಥಮ, ₹10,000 ನಗದು ದ್ವಿತೀಯ, ₹5,000 ನಗದು ತೃತೀಯ ಬಹುಮಾನ ನಿಗದಿಪಡಿಸಲಾಗಿದೆ.

ಜಿಲ್ಲಾ ಪುರುಷರ ಕುಸ್ತಿ ಸ್ಪರ್ಧೆಯು 57ರಿಂದ 61ಕೆ.ಜಿ, 61 ರಿಂದ 65 ಕೆ,ಜಿ, 65ರಿಂದ 70 ಕೆ.ಜಿ, 70ರಿಂದ 74 ಕೆ.ಜಿ ವಿಭಾಗದಲ್ಲಿ ಗೆದ್ದವರಿಗೆ ₹20,000 ನಗದು ಪ್ರಥಮ, ₹10,000 ನಗದು ತೃತೀಯ ಹಾಗೂ ₹5,000 ನಗದು ತೃತೀಯ ಬಹುಮಾನ ಇದೆ.

ಪುರುಷರ ಕಲ್ಲುಗುಂಡು ಎತ್ತುವ ಸ್ಪರ್ಧೆಯಲ್ಲಿ ಗೆದ್ದವರಿಗೆ ಪ್ರಥಮ ಬಹುಮಾನ ₹15,000 ನಗದು, ₹10,000 ನಗದು ದ್ವಿತೀಯ, ₹5,000 ನಗದು ತೃತೀಯ ಬಹುಮಾನ ಇಡಲಾಗಿದೆ.

ಜಿಲ್ಲಾಮಟ್ಟದ ಕುಸ್ತಿಯಲ್ಲಿ ಭಾಗವಹಿಸಲು ಇಚ್ಛಿಸುವವರು ಗುರುತಿನ ಚೀಟಿಯೊಂದಿಗೆ ಹಾಜರಾಗಬೇಕು. ಎಲ್ಲಾ ಸ್ಪರ್ಧಾಳುಗಳು ಆಧಾರ್‌ ಕಾರ್ಡ್‌ನೊಂದಿಗೆ ಪಾಲ್ಗೊಳ್ಳುವುದು ಕಡ್ಡಾಯ.

ಪ್ರಶಸ್ತಿ ಪತ್ರ: ಹಂಪಿ ಉತ್ಸವದ ನಿಮಿತ್ತ ಹಮ್ಮಿಕೊಂಡಿರುವ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ 18 ಜನರಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT