'ಜನಾಭಿಪ್ರಾಯ ಪಡೆಯದೆ ಸರ್ವಾಧಿಕಾರಿ ಧೋರಣೆಯಿಂದ ಸರ್ಕಾರವು ಸಂಪುಟ ಸಭೆಯಲ್ಲಿ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆಯನ್ನು ಸ್ಥಾಪಿಸಲು ನಿರ್ಧರಿಸಿದೆ. ಇದು ಗಡಿ ಭಾಗದ ಸಮಸ್ಯೆಗಳಿಗೆ ಇಂಬುಕೊಡುವ ನಿರ್ಧಾರ' ಎಂದು ಮುಖಂಡರಾದ ಎಸ್. ಪನ್ನರಾಜ್, ದರೂರು ಪುರುಷೋತ್ತಮ ಗೌಡ, ಕುಡುತಿನಿ ಶ್ರೀನಿವಾಸ, ಕೆ.ಎರ್ರಿಸ್ವಾಮಿ, ಟಿ.ಜಿ.ವಿಠಲ್, ಸಿದ್ಮಲ್ ಮಂಜುನಾಥ್, ಬಿ.ಎಂ.ಪಾಟೀಲ ಆತಂಕ ವ್ಯಕ್ತಪಡಿಸಿದರು.