ಕೊಪ್ಪಳ ಜಿಲ್ಲೆ ಕನಕಗಿರಿ ನಿವಾಸಿ ಅಶ್ವಿನಿ (25) ಮೃತ ಯುವತಿ. ‘ಯುವತಿಯ ಪೋಷಕರು ಆಕೆಯನ್ನು ಹುಬ್ಬಳ್ಳಿಯ ಮಾನಸಿಕ ರೋಗ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲು ಕರೆದುಕೊಂಡು ಹೋಗುತ್ತಿದ್ದರು. ಕೊಪ್ಪಳ ಬಸ್ ನಿಲ್ದಾಣದಿಂದ ತಪ್ಪಿಸಿಕೊಂಡ ಯುವತಿ ಸೋಮವಾರ ನಗರದ ಬಸ್ ನಿಲ್ದಾಣಕ್ಕೆ ಬಂದು ಕಟ್ಟಡ ಏರಿದ್ದಾಳೆ. ಈ ವೇಳೆ ಅಲ್ಲಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.