ರಾತ್ರಿ ಶ್ರದ್ಧಾ, ಭಕ್ತಿಯಿಂದ ನಗರದ ಪ್ರಮುಖ ಮಾರ್ಗಗಳಲ್ಲಿ ಪೀರಲ ದೇವರ ಮೆರವಣಿಗೆ ನಡೆಸಿದರು. ಕೆಲವರು ಹುಲಿ ವೇಷಧಾರಿಗಳಾಗಿ, ಹೆಜ್ಜೆ ಹಾಕಿ ಹರಕೆ ತೀರಿಸಿದರು. ತಡರಾತ್ರಿ ವರೆಗೆ ಜನ ರಸ್ತೆಬದಿಯಲ್ಲಿ ನಿಂತು ಮೆರವಣಿಗೆ ಕಣ್ತುಂಬಿಕೊಂಡರು. ಹಿಂದೂ, ಮುಸ್ಲಿಮ ಸಮುದಾಯದವರು ಭಾಗವಹಿಸಿ, ಭಾವೈಕ್ಯತೆ ತೋರಿದರು.