ತೋರಣಗಲ್ಲು: ಇಲ್ಲಿಗೆ ಸಮೀಪದ ವಡ್ಡು ಗ್ರಾಮದ ಕೊರಚರ ಚೆನ್ನಪ್ಪ (55) ಎಂಬುವವರು ವಡ್ಡು ಗ್ರಾಮದ ಹೊರವಲಯದ ನಾರಿಹಳ್ಳದ ದಂಡೆಯಲ್ಲಿ ಮನೆಯ ಕೆಲಸಕ್ಕಾಗಿ ಲಕ್ಕಿಗೀಡವನ್ನು ಕಡಿಯುವ ವೇಳೆ ಆಕಸ್ಮಿಕವಾಗಿ ಹಳ್ಳಕ್ಕೆ ಬಿದ್ದು ನೀರಿನ ರಭಸಕ್ಕೆ ಭಾನುವಾರ ಸಂಜೆ ಕೊಚ್ಚಿಕೊಂಡು ಹೋಗಿದ್ದಾರೆ.
ನಾರಿಹಳ್ಳದ ನೀರಿನ ಹರಿವಿನ ಪ್ರಮಾಣ ಕಡಿಮೆಯಾದ ಬಳಿಕ ಮೃತ ದೇಹವು ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.ಸ್ಥಳಕ್ಕೆ ಗಾದಿಗನೂರು ಠಾಣೆಯ ಪೊಲೀಸರು ಭೇಟಿ ನೀಡಿದ್ದರು.