<p><strong>ಹೊಸಪೇಟೆ:</strong> ತಾಲ್ಲೂಕಿನಾದ್ಯಂತ ಇದುವರೆಗೆ ಸಮರ್ಪಕವಾಗಿ ಮಳೆಯಾಗದ ಕಾರಣ ಶೇ 10ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ.</p>.<p>8,428 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶ ಸೇರಿದಂತೆ ಒಟ್ಟು 33,100 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ, 3,360 ಹೆಕ್ಟೇರ್ನಲ್ಲಷ್ಟೇ ರೈತರು ಬಿತ್ತನೆ ಮಾಡಿದ್ದಾರೆ. ಭತ್ತ, ಕಬ್ಬು, ಮೆಕ್ಕೆಜೋಳ, ಸಜ್ಜೆ ಬಿತ್ತನೆ ಮಾಡಿದ್ದಾರೆ. ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಈ ಸಲವೂ ರೈತರಿಗೆ ಜೋಳ ಬೆಳೆಯಲು ಸಾಧ್ಯವಾಗಿಲ್ಲ.</p>.<p>ಜೂನ್ ಒಂದರಿಂದ ಜು.10ರ ವರೆಗೆ ತಾಲ್ಲೂಕಿನ ಸಾಧಾರಣ ಮಳೆ ಪ್ರಮಾಣ 84 ಮಿ.ಮೀ. ಆದರೆ, 61 ಮಿ.ಮೀ ಮಳೆಯಾಗಿದ್ದು, 23 ಮಿ.ಮೀ ಕೊರತೆ ಮಳೆಯಾಗಿದೆ.</p>.<p>ಮಳೆಗಾಲ ಆರಂಭಗೊಂಡ ನಂತರ ಇದುವರೆಗೆ ಒಮ್ಮೆಯೂ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ತಾಲ್ಲೂಕಿನ ಹಲವು ಕಡೆಗಳಲ್ಲಿ ಈಗಲೂ ನೆಲ ಹಸಿಯಾಗಿಲ್ಲ. ಸಕಾಲಕ್ಕೆ ಮಳೆ ಆಗಬಹುದು ಎಂದು ಕೆಲವರು ಬಿತ್ತನೆಗೆ ಜಮೀನು ಹದ ಮಾಡಿಕೊಂಡಿದ್ದರು. ಆದರೆ, ಅವರ ನಿರೀಕ್ಷೆ ಹುಸಿಯಾಗಿದೆ.</p>.<p>ಕೆಲ ದಿನಗಳಿಂದ ಆಗೊಮ್ಮೆ, ಈಗೊಮ್ಮೆ ತುಂತುರು ಮಳೆಯಾಗುತ್ತಿರುವ ಕಾರಣ ಕೆಲವರು ಈಗ ನೆಲ ಹದ ಮಾಡಿಕೊಂಡು ಬಿತ್ತನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೆಲವು ರೈತರಂತೂ ಈ ಸಲ ಬಿತ್ತನೆ ಮಾಡುವುದೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.</p>.<p>ಬೆಳಿಗ್ಗೆಯಿಂದ ಸಂಜೆಯ ವರೆಗೆ ದಟ್ಟ ಕಾರ್ಮೋಡ ಇರುತ್ತಿದೆ. ಆದರೆ, ಅದು ಮಳೆಯಾಗಿ ಬದಲಾಗುತ್ತಿಲ್ಲ. ಇನ್ನೇನು ಮಳೆ ಬಂದೇ ಬಿಟ್ಟಿತ್ತು ಅಂದುಕೊಳ್ಳುತ್ತಿರುವಾಗಲೇ ಮೋಡಗಳು ಚದುರಿ ಹೋಗುತ್ತಿವೆ. ಬಾನಂಗಳದಲ್ಲಿ ಈ ಆಟ ಎರಡು ವಾರಗಳಿಂದ ನಡೆಯುತ್ತ ಇದೆ. ಹೀಗಾಗಿಯೇ ರೈತರು ಮಳೆಯ ಬಗ್ಗೆ ಭರವಸೆಯನ್ನೇ ಕಳೆದುಕೊಂಡಿದ್ದಾರೆ. ಬಿತ್ತನೆಯಿಂದ ಹಿಂದೆ ಸರಿಯಲು ಇದು ಕೂಡ ಪ್ರಮುಖವಾದ ಕಾರಣವಾಗಿದೆ.</p>.<p>‘ಮಳೆ ಸುರಿಯುವ ಯಾವ ಲಕ್ಷಣಗಳು ಗೋಚರಿಸುತ್ತಿಲ್ಲ. ಬೀಜ ಖರೀದಿಸಿ ಬಿತ್ತನೆ ಮಾಡಿದರೆ ಹೂಡಿದ ಬಂಡವಾಳ ಕೂಡ ಕೈಸೇರುವ ಸಾಧ್ಯತೆ ಇಲ್ಲ. ಒಂದೆರಡು ಭಾರಿ ಮಳೆ ಬರುವವರೆಗೆ ಬಿತ್ತನೆ ಮಾಡದಿರಲು ನಿರ್ಧರಿಸಿದ್ದೇನೆ’ ಎಂದು ಕಮಲಾಪುರದ ರೈತ ಶಿವಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ನಾಲ್ಕು ವರ್ಷಗಳಿಂದ ತಾಲ್ಲೂಕಿನಲ್ಲಿ ಬರ ಇದೆ. ಈ ಸಲವಾದರೂ ಬರ ದೂರವಾಗಿ ಮಳೆಯಾಗಬಹುದು ಅಂದುಕೊಂಡಿದ್ದೆ. ಆದರೆ, ದೇವರಿಗೆ ಯಾಕೋ ನಮ್ಮ ಭಾಗದ ಮೇಲೆ ಕೋಪ ಇದ್ದಂತೆ ಕಾಣಿಸುತ್ತಿದೆ. ಹೀಗಾಗಿಯೇ ಮಳೆಯಾಗುತ್ತಿಲ್ಲ’ ಎಂದರು.</p>.<p>‘ನೆಲ ಹದ ಮಾಡಿಕೊಂಡು ಬಿತ್ತನೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಉತ್ತಮ ಮಳೆಯಾದರಷ್ಟೇ ಬಿತ್ತನೆ ಮಾಡಲಾಗುವುದು. ಒಂದುವರೆ ತಿಂಗಳಾಗುತ್ತ ಬಂದರೂ ಉತ್ತಮ ಮಳೆಯಾಗಿಲ್ಲ. ಈ ಸಲವೂ ಬರಗಾಲದ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ’ ಎಂದು ಹೇಳಿದರು.</p>.<p>‘ಸಮರ್ಪಕವಾಗಿ ಮಳೆಯಾಗದ ಕಾರಣ ಬಹುತೇಕ ರೈತರು ಬಿತ್ತನೆ ಮಾಡಿಲ್ಲ. ಇದರಿಂದಾಗಿ ಬಿತ್ತನೆಯ ಗುರಿ ಸಾಧಿಸಲು ಆಗಿಲ್ಲ’ ಎಂದು ಕೃಷಿ ಇಲಾಖೆಯ ಅಧಿಕಾರಿ ರೂಪಾ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ:</strong> ತಾಲ್ಲೂಕಿನಾದ್ಯಂತ ಇದುವರೆಗೆ ಸಮರ್ಪಕವಾಗಿ ಮಳೆಯಾಗದ ಕಾರಣ ಶೇ 10ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ.</p>.<p>8,428 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶ ಸೇರಿದಂತೆ ಒಟ್ಟು 33,100 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ, 3,360 ಹೆಕ್ಟೇರ್ನಲ್ಲಷ್ಟೇ ರೈತರು ಬಿತ್ತನೆ ಮಾಡಿದ್ದಾರೆ. ಭತ್ತ, ಕಬ್ಬು, ಮೆಕ್ಕೆಜೋಳ, ಸಜ್ಜೆ ಬಿತ್ತನೆ ಮಾಡಿದ್ದಾರೆ. ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಈ ಸಲವೂ ರೈತರಿಗೆ ಜೋಳ ಬೆಳೆಯಲು ಸಾಧ್ಯವಾಗಿಲ್ಲ.</p>.<p>ಜೂನ್ ಒಂದರಿಂದ ಜು.10ರ ವರೆಗೆ ತಾಲ್ಲೂಕಿನ ಸಾಧಾರಣ ಮಳೆ ಪ್ರಮಾಣ 84 ಮಿ.ಮೀ. ಆದರೆ, 61 ಮಿ.ಮೀ ಮಳೆಯಾಗಿದ್ದು, 23 ಮಿ.ಮೀ ಕೊರತೆ ಮಳೆಯಾಗಿದೆ.</p>.<p>ಮಳೆಗಾಲ ಆರಂಭಗೊಂಡ ನಂತರ ಇದುವರೆಗೆ ಒಮ್ಮೆಯೂ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ತಾಲ್ಲೂಕಿನ ಹಲವು ಕಡೆಗಳಲ್ಲಿ ಈಗಲೂ ನೆಲ ಹಸಿಯಾಗಿಲ್ಲ. ಸಕಾಲಕ್ಕೆ ಮಳೆ ಆಗಬಹುದು ಎಂದು ಕೆಲವರು ಬಿತ್ತನೆಗೆ ಜಮೀನು ಹದ ಮಾಡಿಕೊಂಡಿದ್ದರು. ಆದರೆ, ಅವರ ನಿರೀಕ್ಷೆ ಹುಸಿಯಾಗಿದೆ.</p>.<p>ಕೆಲ ದಿನಗಳಿಂದ ಆಗೊಮ್ಮೆ, ಈಗೊಮ್ಮೆ ತುಂತುರು ಮಳೆಯಾಗುತ್ತಿರುವ ಕಾರಣ ಕೆಲವರು ಈಗ ನೆಲ ಹದ ಮಾಡಿಕೊಂಡು ಬಿತ್ತನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೆಲವು ರೈತರಂತೂ ಈ ಸಲ ಬಿತ್ತನೆ ಮಾಡುವುದೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.</p>.<p>ಬೆಳಿಗ್ಗೆಯಿಂದ ಸಂಜೆಯ ವರೆಗೆ ದಟ್ಟ ಕಾರ್ಮೋಡ ಇರುತ್ತಿದೆ. ಆದರೆ, ಅದು ಮಳೆಯಾಗಿ ಬದಲಾಗುತ್ತಿಲ್ಲ. ಇನ್ನೇನು ಮಳೆ ಬಂದೇ ಬಿಟ್ಟಿತ್ತು ಅಂದುಕೊಳ್ಳುತ್ತಿರುವಾಗಲೇ ಮೋಡಗಳು ಚದುರಿ ಹೋಗುತ್ತಿವೆ. ಬಾನಂಗಳದಲ್ಲಿ ಈ ಆಟ ಎರಡು ವಾರಗಳಿಂದ ನಡೆಯುತ್ತ ಇದೆ. ಹೀಗಾಗಿಯೇ ರೈತರು ಮಳೆಯ ಬಗ್ಗೆ ಭರವಸೆಯನ್ನೇ ಕಳೆದುಕೊಂಡಿದ್ದಾರೆ. ಬಿತ್ತನೆಯಿಂದ ಹಿಂದೆ ಸರಿಯಲು ಇದು ಕೂಡ ಪ್ರಮುಖವಾದ ಕಾರಣವಾಗಿದೆ.</p>.<p>‘ಮಳೆ ಸುರಿಯುವ ಯಾವ ಲಕ್ಷಣಗಳು ಗೋಚರಿಸುತ್ತಿಲ್ಲ. ಬೀಜ ಖರೀದಿಸಿ ಬಿತ್ತನೆ ಮಾಡಿದರೆ ಹೂಡಿದ ಬಂಡವಾಳ ಕೂಡ ಕೈಸೇರುವ ಸಾಧ್ಯತೆ ಇಲ್ಲ. ಒಂದೆರಡು ಭಾರಿ ಮಳೆ ಬರುವವರೆಗೆ ಬಿತ್ತನೆ ಮಾಡದಿರಲು ನಿರ್ಧರಿಸಿದ್ದೇನೆ’ ಎಂದು ಕಮಲಾಪುರದ ರೈತ ಶಿವಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ನಾಲ್ಕು ವರ್ಷಗಳಿಂದ ತಾಲ್ಲೂಕಿನಲ್ಲಿ ಬರ ಇದೆ. ಈ ಸಲವಾದರೂ ಬರ ದೂರವಾಗಿ ಮಳೆಯಾಗಬಹುದು ಅಂದುಕೊಂಡಿದ್ದೆ. ಆದರೆ, ದೇವರಿಗೆ ಯಾಕೋ ನಮ್ಮ ಭಾಗದ ಮೇಲೆ ಕೋಪ ಇದ್ದಂತೆ ಕಾಣಿಸುತ್ತಿದೆ. ಹೀಗಾಗಿಯೇ ಮಳೆಯಾಗುತ್ತಿಲ್ಲ’ ಎಂದರು.</p>.<p>‘ನೆಲ ಹದ ಮಾಡಿಕೊಂಡು ಬಿತ್ತನೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಉತ್ತಮ ಮಳೆಯಾದರಷ್ಟೇ ಬಿತ್ತನೆ ಮಾಡಲಾಗುವುದು. ಒಂದುವರೆ ತಿಂಗಳಾಗುತ್ತ ಬಂದರೂ ಉತ್ತಮ ಮಳೆಯಾಗಿಲ್ಲ. ಈ ಸಲವೂ ಬರಗಾಲದ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ’ ಎಂದು ಹೇಳಿದರು.</p>.<p>‘ಸಮರ್ಪಕವಾಗಿ ಮಳೆಯಾಗದ ಕಾರಣ ಬಹುತೇಕ ರೈತರು ಬಿತ್ತನೆ ಮಾಡಿಲ್ಲ. ಇದರಿಂದಾಗಿ ಬಿತ್ತನೆಯ ಗುರಿ ಸಾಧಿಸಲು ಆಗಿಲ್ಲ’ ಎಂದು ಕೃಷಿ ಇಲಾಖೆಯ ಅಧಿಕಾರಿ ರೂಪಾ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>