ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲ್ಲರಿಗೂ ಸುಸಜ್ಜಿತ ಮನೆ’

Last Updated 3 ಮೇ 2018, 19:49 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಎರಡು ಬಿಎಚ್‌ಕೆ ಸುಸಜ್ಜಿತ ಮನೆ ಕಟ್ಟಿಸಿಕೊಡಲಿದ್ದೇವೆ’ ಎಂದು ಸಾಮಾನ್ಯ ಜನತಾ ಪಾರ್ಟಿ ಅಧ್ಯಕ್ಷ ಪ್ರವೀಣ್‌ ನಾಯಕ್ ಹೇಳಿದರು.

ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಣಾಳಿಕೆಯನ್ನು ಅವರು ಬಿಡುಗಡೆ ಮಾಡಿದರು.

ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳು

* ರಾಜ್ಯದ ಪ್ರತಿ ಪ್ರಜೆಯ ಬ್ಯಾಂಕ್‌ ಖಾತೆಗೆ ₹25 ಸಾವಿರ

* ಎಲ್ಲರಿಗೂ ಸುಸಜ್ಜಿತ ಎರಡು ಬಿಎಚ್‌ಕೆ ಮನೆ

* ರೈತರಿಗೆ ಒಂದು ಎಕರೆಗೆ ₹10 ಸಾವಿರ ಸಹಾಯ

* ಸಹಕಾರ ಸಂಘದಲ್ಲಿ ಇದುವರೆಗೂ ಪಡೆದುಕೊಂಡಿರುವ ಸಾಲ ಮನ್ನಾ

* ಭೂಮಿ ಇಲ್ಲದ ಪರಿಶಿಷ್ಟ ಜಾತಿ ಕುಟುಂಬಕ್ಕೆ 3 ಎಕರೆ ಹಾಗೂ ಸಾಮಾನ್ಯ ವರ್ಗದ ರೈತರಿಗೆ 2 ಎಕರೆ ಜಮೀನು ಮಂಜೂರು

* ಪ್ರತಿ ಗ್ರಾಮದಲ್ಲಿ ಎರಡು ಹಾಸಿಗೆಗಳ ಆಸ್ಪತ್ರೆ ಸ್ಥಾಪನೆ, ಪದವಿ ವಿದ್ಯಾರ್ಥಿಗಳು ಪ್ರವೇಶಾತಿ ಸಂದ
ರ್ಭದಲ್ಲಿ ನೀಡಿದ ಶುಲ್ಕ ಮರುಪಾವತಿ

* ಒಬ್ಬ ವಿದ್ಯಾರ್ಥಿ ಇದ್ದರೂ ಸರ್ಕಾರಿ ಶಾಲೆ ಮುಚ್ಚದಿರಲು ಆದೇಶ

* ದ್ವಿತೀಯ ಪಿಯು ಮತ್ತು ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಮತ್ತು ಐಪ್ಯಾಡ್‌

* ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಪ್ರಯಾಣ ದರ ಕಡಿತ

* ಮಹಿಳೆಯರಿಗೆ ಪ್ರತಿ ತಿಂಗಳು ₹ 1,000 ಗೌರವಧನ

* ವಿಧವೆಯರನ್ನು ಮದುವೆಯಾಗುವವರಿಗೆ ₹1ಲಕ್ಷ ಸಹಾಯಧನ

* ಬಿಎಂಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT