ವಾರ್ಡ್ ವ್ಯಾಪ್ತಿಯ ಪೊಲೀಸ್ ಕ್ವಾಟರ್ಸ್, ಗಾಂಧಿ ನಗರ, ರಾಮಕೃಷ್ಣ ಬಡಾವಣೆ, ಕಾಂಪೌಂಡರ್ ಲೈನ್, ಜಬ್ಬಲ್ ಸರ್ಕಲ್, ಪಟೇಲ್ ನಗರದಲ್ಲಿ ರಸ್ತೆ, ಸ್ವಚ್ಛತೆ ಸೇರಿದಂತೆ ಯಾವುದು ಸರಿಯಿಲ್ಲ. ಪೊಲೀಸ್ ಕ್ವಾಟರ್ಸ್ನಲ್ಲಿ ಈಗಲೂ ಕೆಮ್ಮಣ್ಣಿನ ರಸ್ತೆಗಳಲ್ಲೇ ಜನ ಓಡಾಡುತ್ತಾರೆ. ಮಳೆ ಬಂದರೆ ಇಡೀ ಪ್ರದೇಶ ಕೊಚ್ಚೆಯಾಗಿ ಬದಲಾಗುತ್ತದೆ.