ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರಾ ಹೊರಹರಿವು ಮತ್ತೆ ಹೆಚ್ಚಳ

Last Updated 31 ಆಗಸ್ಟ್ 2018, 16:12 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ಶುಕ್ರವಾರ ಹೆಚ್ಚಾಗಿದ್ದು, ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸುತ್ತಿರುವುದರಿಂದ ತಾಲ್ಲೂಕಿನ ಹಂಪಿಯ ಕೆಲ ಸ್ಮಾರಕಗಳು ನೀರಿನಲ್ಲಿ ಮುಳುಗಡೆಯಾಗಿವೆ.

ಹಂಪಿಯ ಪುರಂದರ ಮಂಟಪ, ರಾಮ ಲಕ್ಷ್ಮಣ ದೇಗುಲಕ್ಕೆ ಹೋಗುವ ಮಾರ್ಗ, ಪಿತೃಪಿಂಡ ಪ್ರಧಾನ ಮಂಟಪಗಳು ಸಂಪೂರ್ಣ ಮುಳುಗಿವೆ. 22 ಕ್ರಸ್ಟ್‌ಗೇಟ್‌ಗಳನ್ನು ಎರಡು ಅಡಿಗಳ ವರೆಗೆ ತೆರೆದು 82,797 ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ.

59,063 ಕ್ಯುಸೆಕ್‌ ಒಳಹರಿವು ದಾಖಲಾಗಿದೆ. ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಮಟ್ಟ 1,633 ಅಡಿಗಳಿದ್ದು, ಸದ್ಯ 1,632.88 ಅಡಿ ನೀರು ಸಂಗ್ರಹವಾಗಿದೆ. ಜುಲೈ ಕೊನೆಯ ವಾರದಿಂದ ಆ. 26ರ ವರೆಗೆ 50,000 ಕ್ಯುಸೆಕ್‌ಗೂ ಹೆಚ್ಚಿದ್ದ ಒಳಹರಿವು ಶುಕ್ರವಾರ ಬೆಳಗಿನ ಜಾವ ಎಂಟು ಗಂಟೆಯ ವರೆಗೆ 20,796 ಕ್ಯುಸೆಕ್‌ಗೆ ತಗ್ಗಿತ್ತು. ಆದರೆ, ಸಂಜೆ ಏಕಾಏಕಿ ಒಳಹರಿವು ಹೆಚ್ಚಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT