ಬೆಂಗಳೂರು: ನಗರದಲ್ಲಿಯ ಭದ್ರತೆ ನೆಪವೊಡ್ಡಿ ಪೊಲೀಸ್ ಸಿಬ್ಬಂದಿಗೆ ಇದೇ 19ರಿಂದ ಅನ್ವಯವಾಗುವಂತೆ ವಾರದ ರಜೆ ಸೇರಿದಂತೆ ಯಾವುದೇ ರಜೆ ನೀಡದಿರಲು ನಿರ್ಧರಿಸಲಾಗಿದೆ.
ಕೋರಮಂಗಲ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಬಿ.ಎಸ್. ಮಂಜುನಾಥ್ ಈ ಸಂಬಂಧ ತಮ್ಮ ಠಾಣೆಯ ಸಿಬ್ಬಂದಿಗೆ ಸಂಬಂಧಪಟ್ಟಂತೆ ಭಾನುವಾರ ‘ಜ್ಞಾಪನಾ ಸೂಚನೆ’ ಹೊರಡಿಸಿದ್ದಾರೆ.
‘ಈಗಾಗಲೇ ನಗರದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಮುಂಬರುವ ಗೌರಿ ಗಣೇಶ ಹಬ್ಬ ಸಂಬಂಧಪಟ್ಟಂತೆ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಬೇಕಿದೆ. ಹೀಗಾಗಿ, ರಜೆ ನೀಡಲು ಆಗುತ್ತಿಲ್ಲ’ ಎಂದು ತಿಳಿಸಲಾಗಿದೆ.
‘ಇದು, ಏಕಪಕ್ಷೀಯ ನಿರ್ಧಾರ. ಸಾಂದರ್ಭಿಕ ರಜೆ ಇಲ್ಲದಿದ್ದರೂ ಪರವಾಗಿಲ್ಲ. ವಾರದ ರಜೆ ಅಗತ್ಯ’ ಎಂದು ಕೆಲ ಸಿಬ್ಬಂದಿ ಪ್ರತಿಕ್ರಿಯಿಸಿದ್ದಾರೆ.