ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಟೆಕಿ ಸಗೀನ್ ಅವರು 2019ನೇ ಸಾಲಿನಲ್ಲಿ ಕೇರಳದ ಎರ್ನಾಕುಲಂಗೆ 148 ಆಸನಗಳನ್ನು ಕಾಯ್ದಿರಿಸಿದ್ದರು. ಪ್ರಯಾಣಕ್ಕೆ ₹1.78 ಲಕ್ಷವನ್ನು ಅವರು ಖರ್ಚು ಮಾಡಿದ್ದರು. ಪಿ. ಕೃಷ್ಣ ಪ್ರಸಾದ್ ಎಂಬುವರು ತ್ರಿಶೂರಿಗೆ 129 ಆಸನಗಳನ್ನು ಕಾಯ್ದಿರಿಸಿ ₹1.37 ಲಕ್ಷ, ಬಿ. ನರಸಿಂಹಪ್ರಭು ಅವರು ಪಣಜಿಗೆ 125 ಆಸನ ಕಾಯ್ದಿರಿಸಿ ₹1.24 ಲಕ್ಷವನ್ನು ಪ್ರಯಾಣಕ್ಕೆ ಖರ್ಚು ಮಾಡಿದ್ದರು.