‘ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ ವಾಸ್ವಾನ್ ಅವರಿಗೆ ಆರೋಪಿ ನೆಹರೂ ಸಿಂಗ್ ಪರಿಚಯವಾಗಿತ್ತು. ಆನ್ಲೈನ್ ಮೂಲಕ ₹ 1,000 ಶುಲ್ಕ ಸಮೇತ ಕಂಪನಿಯೊಂದರಲ್ಲಿ ಕೆಲಸಕ್ಕೆ ಅರ್ಜಿ ಹಾಕಿಸಿದ್ದ ನೆಹರೂ ಸಿಂಗ್, ನಿರಂತರವಾಗಿ ಒಡನಾಟ ಇಟ್ಟುಕೊಂಡಿದ್ದರು. ಕೆಲಸ ಮಾಡುವ ಬದಲು ಹಣ ಹೂಡಿಕೆ ಮಾಡಿದರೆ, ಹೆಚ್ಚಿನ ಲಾಭ ಸಿಗುವುದಾಗಿ ನೆಹರೂ ಸಿಂಗ್ ಹೇಳಿದ್ದರು. ಉಮೇಶ್ ಹಾಗೂ ಇತರೆ ಆರೋಪಿಗಳನ್ನು ಪರಿಚಯ ಮಾಡಿಸಿದ್ದರು.’