<p><strong>ಬೆಂಗಳೂರು:</strong> ಕರ್ನಾಟಕ ಚಿತ್ರಕಲಾ ಪರಿಷತ್ನ 15ನೇ ‘ಚಿತ್ರಸಂತೆ’ಗೆ ನಗರದ ಕುಮಾರಕೃಪಾ ರಸ್ತೆಯ ಪರಿಸರ ಸಜ್ಜಾಗಿದೆ. ಇಲ್ಲಿ ಭಾನುವಾರ ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೆ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.</p>.<p>ಪರಿಸರ ಕಾಳಜಿ, ಹವಾಮಾನ ವೈಪರೀತ್ಯ ಈ ಬಾರಿಯ ಚಿತ್ರ ಸಂತೆಯ ಪ್ರಮುಖ ವಿಷಯ. ವಿಜ್ಞಾನಿ ಸಿ.ಎನ್.ಆರ್. ರಾವ್ ಅವರು ಈ ಕಲಾಕೃತಿಗಳ ಮೇಳವನ್ನು ಉದ್ಘಾಟಿಸುವರು.</p>.<p>ವಿವಿಧ ರಾಜ್ಯಗಳಿಂದ ಬಂದಿರುವ 20ರಿಂದ 80 ವರ್ಷ ವಯೋಮಾನದ ಕಲಾವಿದರು ಈ ಸಂತೆಯಲ್ಲಿ ಭಾಗವಹಿಸಲಿದ್ದಾರೆ. 20ಕ್ಕೂ ಹೆಚ್ಚು ರಾಜ್ಯಗಳ 2,000 ಹವ್ಯಾಸಿ ಮತ್ತು ವೃತ್ತಿಪರ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ. 1,000 ಮಳಿಗೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಬಾರಿ 4 ಲಕ್ಷ ಕಲಾಪ್ರೇಮಿಗಳು ಪಾಲ್ಗೊಳ್ಳಬಹುದು ಮತ್ತು ₹3 ಕೋಟಿ ವಹಿವಾಟು ನಡೆಯಬಹುದೆಂದು ನಿರೀಕ್ಷಿಸಲಾಗಿದೆ.</p>.<p>ಚಿತ್ರಸಂತೆ ವೀಕ್ಷಿಸಲು ವಯಸ್ಸಾದವರು ಹಾಗೂ ಅಂಗವಿಕಲರಿಗೆ ಅನುಕೂಲ ಕಲ್ಪಿಸಲು ವಿಶೇಷ ವಾಹನ ವ್ಯವಸ್ಥೆ ಇರಲಿದೆ. ಜನಪದ ನೃತ್ಯ ಹಾಗೂ ಚಂದ್ರಿಕಾ ಗುರುರಾಜ್ ಅವರಿಂದ ಸಂಗೀತ ಕಾರ್ಯಕ್ರಮ ಇರುತ್ತದೆ.</p>.<p><strong>ಸಂಚಾರ ಮಾರ್ಗ ಬದಲಾವಣೆ:</strong> ಕುಮಾರಕೃಪಾ ರಸ್ತೆಯಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಮೌರ್ಯ ವೃತ್ತ ಮತ್ತು ಆನಂದರಾವ್ ವೃತ್ತದಿಂದ ಬರುವ ವಾಹನಗಳು, ರೇಸ್ ವ್ಯೂ ಜಂಕ್ಷನ್ ಮೂಲಕ ಕುಮಾರಕೃಪಾ ರಸ್ತೆ ಪ್ರವೇಶಿಸಲು ನಿರ್ಬಂಧಿಸಲಾಗಿದೆ. ಈ ವಾಹನಗಳು ಟ್ರಿಲೈಟ್ ಜಂಕ್ಷನ್, ಬಸವೇಶ್ವರ ವೃತ್ತ, ಹಳೇ ಹೈಗ್ರೌಂಡ್ಸ್ ಜಂಕ್ಷನ್ ಹಾಗೂ ವಿಂಡ್ಸರ್ ಮ್ಯಾನರ್ ವೃತ್ತ ಮಾರ್ಗವಾಗಿ ಸಂಚರಿಸಬಹುದು.</p>.<p>ಟಿ. ಚೌಡಯ್ಯ ರಸ್ತೆಯಿಂದ ಬರುವ ವಾಹನಗಳು, ವಿಂಡ್ಸರ್ ಮ್ಯಾನರ್ ವೃತ್ತದ ಮೂಲಕ ಕುಮಾರಕೃಪಾ ರಸ್ತೆ ಪ್ರವೇಶಿಸಲು ಅವಕಾಶವಿಲ್ಲ. ಅದರ ಬದಲು ಹಳೇ ಹೈಗ್ರೌಂಡ್ಸ್ ಜಂಕ್ಷನ್, ಎಲ್.ಆರ್.ಡಿ.ಇ, ಬಸವೇಶ್ವರ ವೃತ್ತ ಹಾಗೂ ರೇಸ್ ಕೋರ್ಸ್ ರಸ್ತೆ ಮೂಲಕ ಸಾಗಬಹುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.</p>.<p><strong>ವಾಹನ ನಿಲುಗಡೆ ವ್ಯವಸ್ಥೆ: </strong>ರೈಲ್ವೆ ಪ್ಯಾರಲಲ್ ರಸ್ತೆ, ರೇಸ್ಕೋರ್ಸ್ ರಸ್ತೆ (ಟ್ರಿಲೈಟ್ ಜಂಕ್ಷನ್ನಿಂದ ಮೌರ್ಯ ಜಂಕ್ಷನ್ವರೆಗೆ ರಸ್ತೆಯ ಪೂರ್ವ ಭಾಗ), ಕ್ರಿಸೆಂಟ್ ರಸ್ತೆ (ಗುರುರಾಜ ಕಲ್ಯಾಣ ಮಂಟಪದಿಂದ ಜನಾರ್ದನ್ ಹೋಟೆಲ್ವರೆಗೆ) ವಾಹನಗಳ ನಿಲುಗಡೆಗೆ ಅವಕಾಶ<br /> ಕಲ್ಪಿಸಲಾಗಿದೆ.</p>.<p><strong>ಸಂತೆಗೆ ಬರುವವರಿಗೆ ಕಿವಿಮಾತು</strong></p>.<p>* ಬೆಳಗ್ಗೆಯೇ ಚಿತ್ರಸಂತೆಗೆ ಭೇಟಿ ನೀಡಿದರೆ ಉತ್ತಮ ಪೇಂಟಿಂಗ್ ಖರೀದಿಸಬಹುದು</p>.<p>* ಪೇಟಿಂಗ್ಸ್ ಖರೀದಿಸಲು ಅಗತ್ಯ ಹಣ ತನ್ನಿ. ಜತೆಗೆ ಸ್ಥಳದಲ್ಲಿ ಎಟಿಎಂ, ಕ್ರೆಡಿಟ್, ಡೆಬಿಟ್, ಪೇಟಿಎಂ ಬಳಸಬಹುದು.</p>.<p>* ನೀರು ಹಾಗೂ ಲಘು ಆಹಾರವನ್ನು ಜತೆಯಲ್ಲಿ ತಂದರೆ ಒಳ್ಳೆಯದು</p>.<p>* ಚಿತ್ರಸಂತೆಯಲ್ಲಿ ಜನದಟ್ಟಣೆ ಇರುವುದರಿಂದ ಕುಳಿತುಕೊಳ್ಳಲು ಆಸನ ಲಭ್ಯವಿರುವುದಿಲ್ಲ</p>.<p>* ತಡವಾಗಿ ಬರುವವರಿಗೆ ಪಾರ್ಕಿಂಗ್ ಸೌಲಭ್ಯ ಸಿಗುವುದು ಕಷ್ಟ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕರ್ನಾಟಕ ಚಿತ್ರಕಲಾ ಪರಿಷತ್ನ 15ನೇ ‘ಚಿತ್ರಸಂತೆ’ಗೆ ನಗರದ ಕುಮಾರಕೃಪಾ ರಸ್ತೆಯ ಪರಿಸರ ಸಜ್ಜಾಗಿದೆ. ಇಲ್ಲಿ ಭಾನುವಾರ ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೆ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.</p>.<p>ಪರಿಸರ ಕಾಳಜಿ, ಹವಾಮಾನ ವೈಪರೀತ್ಯ ಈ ಬಾರಿಯ ಚಿತ್ರ ಸಂತೆಯ ಪ್ರಮುಖ ವಿಷಯ. ವಿಜ್ಞಾನಿ ಸಿ.ಎನ್.ಆರ್. ರಾವ್ ಅವರು ಈ ಕಲಾಕೃತಿಗಳ ಮೇಳವನ್ನು ಉದ್ಘಾಟಿಸುವರು.</p>.<p>ವಿವಿಧ ರಾಜ್ಯಗಳಿಂದ ಬಂದಿರುವ 20ರಿಂದ 80 ವರ್ಷ ವಯೋಮಾನದ ಕಲಾವಿದರು ಈ ಸಂತೆಯಲ್ಲಿ ಭಾಗವಹಿಸಲಿದ್ದಾರೆ. 20ಕ್ಕೂ ಹೆಚ್ಚು ರಾಜ್ಯಗಳ 2,000 ಹವ್ಯಾಸಿ ಮತ್ತು ವೃತ್ತಿಪರ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ. 1,000 ಮಳಿಗೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಬಾರಿ 4 ಲಕ್ಷ ಕಲಾಪ್ರೇಮಿಗಳು ಪಾಲ್ಗೊಳ್ಳಬಹುದು ಮತ್ತು ₹3 ಕೋಟಿ ವಹಿವಾಟು ನಡೆಯಬಹುದೆಂದು ನಿರೀಕ್ಷಿಸಲಾಗಿದೆ.</p>.<p>ಚಿತ್ರಸಂತೆ ವೀಕ್ಷಿಸಲು ವಯಸ್ಸಾದವರು ಹಾಗೂ ಅಂಗವಿಕಲರಿಗೆ ಅನುಕೂಲ ಕಲ್ಪಿಸಲು ವಿಶೇಷ ವಾಹನ ವ್ಯವಸ್ಥೆ ಇರಲಿದೆ. ಜನಪದ ನೃತ್ಯ ಹಾಗೂ ಚಂದ್ರಿಕಾ ಗುರುರಾಜ್ ಅವರಿಂದ ಸಂಗೀತ ಕಾರ್ಯಕ್ರಮ ಇರುತ್ತದೆ.</p>.<p><strong>ಸಂಚಾರ ಮಾರ್ಗ ಬದಲಾವಣೆ:</strong> ಕುಮಾರಕೃಪಾ ರಸ್ತೆಯಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಮೌರ್ಯ ವೃತ್ತ ಮತ್ತು ಆನಂದರಾವ್ ವೃತ್ತದಿಂದ ಬರುವ ವಾಹನಗಳು, ರೇಸ್ ವ್ಯೂ ಜಂಕ್ಷನ್ ಮೂಲಕ ಕುಮಾರಕೃಪಾ ರಸ್ತೆ ಪ್ರವೇಶಿಸಲು ನಿರ್ಬಂಧಿಸಲಾಗಿದೆ. ಈ ವಾಹನಗಳು ಟ್ರಿಲೈಟ್ ಜಂಕ್ಷನ್, ಬಸವೇಶ್ವರ ವೃತ್ತ, ಹಳೇ ಹೈಗ್ರೌಂಡ್ಸ್ ಜಂಕ್ಷನ್ ಹಾಗೂ ವಿಂಡ್ಸರ್ ಮ್ಯಾನರ್ ವೃತ್ತ ಮಾರ್ಗವಾಗಿ ಸಂಚರಿಸಬಹುದು.</p>.<p>ಟಿ. ಚೌಡಯ್ಯ ರಸ್ತೆಯಿಂದ ಬರುವ ವಾಹನಗಳು, ವಿಂಡ್ಸರ್ ಮ್ಯಾನರ್ ವೃತ್ತದ ಮೂಲಕ ಕುಮಾರಕೃಪಾ ರಸ್ತೆ ಪ್ರವೇಶಿಸಲು ಅವಕಾಶವಿಲ್ಲ. ಅದರ ಬದಲು ಹಳೇ ಹೈಗ್ರೌಂಡ್ಸ್ ಜಂಕ್ಷನ್, ಎಲ್.ಆರ್.ಡಿ.ಇ, ಬಸವೇಶ್ವರ ವೃತ್ತ ಹಾಗೂ ರೇಸ್ ಕೋರ್ಸ್ ರಸ್ತೆ ಮೂಲಕ ಸಾಗಬಹುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.</p>.<p><strong>ವಾಹನ ನಿಲುಗಡೆ ವ್ಯವಸ್ಥೆ: </strong>ರೈಲ್ವೆ ಪ್ಯಾರಲಲ್ ರಸ್ತೆ, ರೇಸ್ಕೋರ್ಸ್ ರಸ್ತೆ (ಟ್ರಿಲೈಟ್ ಜಂಕ್ಷನ್ನಿಂದ ಮೌರ್ಯ ಜಂಕ್ಷನ್ವರೆಗೆ ರಸ್ತೆಯ ಪೂರ್ವ ಭಾಗ), ಕ್ರಿಸೆಂಟ್ ರಸ್ತೆ (ಗುರುರಾಜ ಕಲ್ಯಾಣ ಮಂಟಪದಿಂದ ಜನಾರ್ದನ್ ಹೋಟೆಲ್ವರೆಗೆ) ವಾಹನಗಳ ನಿಲುಗಡೆಗೆ ಅವಕಾಶ<br /> ಕಲ್ಪಿಸಲಾಗಿದೆ.</p>.<p><strong>ಸಂತೆಗೆ ಬರುವವರಿಗೆ ಕಿವಿಮಾತು</strong></p>.<p>* ಬೆಳಗ್ಗೆಯೇ ಚಿತ್ರಸಂತೆಗೆ ಭೇಟಿ ನೀಡಿದರೆ ಉತ್ತಮ ಪೇಂಟಿಂಗ್ ಖರೀದಿಸಬಹುದು</p>.<p>* ಪೇಟಿಂಗ್ಸ್ ಖರೀದಿಸಲು ಅಗತ್ಯ ಹಣ ತನ್ನಿ. ಜತೆಗೆ ಸ್ಥಳದಲ್ಲಿ ಎಟಿಎಂ, ಕ್ರೆಡಿಟ್, ಡೆಬಿಟ್, ಪೇಟಿಎಂ ಬಳಸಬಹುದು.</p>.<p>* ನೀರು ಹಾಗೂ ಲಘು ಆಹಾರವನ್ನು ಜತೆಯಲ್ಲಿ ತಂದರೆ ಒಳ್ಳೆಯದು</p>.<p>* ಚಿತ್ರಸಂತೆಯಲ್ಲಿ ಜನದಟ್ಟಣೆ ಇರುವುದರಿಂದ ಕುಳಿತುಕೊಳ್ಳಲು ಆಸನ ಲಭ್ಯವಿರುವುದಿಲ್ಲ</p>.<p>* ತಡವಾಗಿ ಬರುವವರಿಗೆ ಪಾರ್ಕಿಂಗ್ ಸೌಲಭ್ಯ ಸಿಗುವುದು ಕಷ್ಟ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>