‘1200 ಅಡಿ ಕೊರೆದರೂ ನೀರಿಲ್ಲ’
‘ನಗರದಲ್ಲಿ ಈ ಮೊದಲು 400 ಅಡಿ ಕೊರೆದರೆ ನೀರು ಸಿಗುತ್ತಿತ್ತು. ಇದೀಗ 1200 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ನಾವೆಲ್ಲರೂ ಸೇರಿ ಮಳೆನೀರು ಇಂಗಿಸಲಿಕ್ಕೆ ಮುಂದಾಗಬೇಕು’ ಎಂದು ಜಲಮಂಡಳಿ ಅಧ್ಯಕ್ಷರು ಹೇಳಿದರು. ಅಂತರ್ಜಲ ಮಟ್ಟ ಸುಧಾರಿಸಲು 15 ದಿನಗಳಲ್ಲಿ 15 ಕೆರೆಗಳನ್ನು ಸಂಸ್ಕರಿಸಿದ ನೀರಿನಿಂದ ತುಂಬಿಸಲಾಗಿದೆ. ವರ್ಷದಲ್ಲಿ 200 ಕೆರೆಗಳನ್ನು ತುಂಬಿಸುವ ಗುರಿ ಇದೆ. ಇದಕ್ಕೆ ಜಲಮಿತ್ರರ ಸಹಕಾರ ಅಗತ್ಯ ಎಂದರು. ಬೆಂಗಳೂರಿನಲ್ಲಿ ಉದ್ಭವಿಸಿದ್ದ ನೀರಿನ ಸಮಸ್ಯೆಯನ್ನು 45 ದಿನಗಳಲ್ಲಿ ಶೇ 80ರಷ್ಟು ಬಗೆಹರಿಸಿದ್ದೇವೆ. ಇನ್ನೂ ಕೆಲಕಡೆ ಸಮಸ್ಯೆಗಳಿದ್ದು ಅವುಗಳನ್ನು ಬಗೆಹರಿಸಲು ಮಂಡಳಿ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದರು.