‘ತಾಯಿ ಹಾಗೂ ಚಿಕ್ಕಮ್ಮನ ಜತೆ ನಾಗರಬಾವಿ ವಿಲೇಜ್ನಲ್ಲಿರುವ ಚಿನ್ನಾಭರಣ ಅಂಗಡಿಗೆ ಝಾನ್ಸಿ ತೆರಳಿದ್ದಳು. ಝಾನ್ಸಿ ಚಿಕ್ಕಮ್ಮನ ಜತೆ ಅಂಗಡಿಯೊಂದರ ಬಳಿ ನಿಂತಿದ್ದಳು. ಆಕೆಯ ತಾಯಿ ಮೊಬೈಲ್ನಲ್ಲಿ ಮಾತಾಡಿಕೊಂಡು ಚಿನ್ನಾಭರಣ ಅಂಗಡಿ ಕಡೆಯ ಮುಂಭಾಗದಲ್ಲಿ ರಸ್ತೆಬದಿ ನಿಂತಿದ್ದರು. ಅದನ್ನು ಗಮನಿಸಿದ ಝಾನ್ಸಿ, ತಾಯಿ ಬಳಿ ಹೋಗಲು ಏಕಾಏಕಿ ಓಡಿ ಬಂದಿದ್ದಾಳೆ. ಅದೇ ವೇಳೆ ನಾಗರಬಾವಿ ಕಡೆಗೆ ತೆರಳಲು ವೇಗವಾಗಿ ಬಂದ ಉಪೇಂದ್ರ ಅವರು ಕಾರನ್ನು ಬಲಕ್ಕೆ ತಿರುವು ಪಡೆದಾಗ ಮಗುವಿಗೆ ಡಿಕ್ಕಿ ಹೊಡೆದಿದ್ದು, ಆಕೆ ಮೇಲೆಯೇ ಕಾರು ಹರಿದಿತ್ತು’ ಎಂದು ಪೊಲೀಸರು ಹೇಳಿದರು.